ADVERTISEMENT

ಉಡುಪಿ: ಗುಡುಗು ಅಬ್ಬರ; ಸಾಧಾರಣ ಮಳೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 14:42 IST
Last Updated 18 ಏಪ್ರಿಲ್ 2021, 14:42 IST

ಉಡುಪಿ: ಕುಂದಾಪುರ, ಬ್ರಹ್ಮಾವರ, ಉಡುಪಿ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಭಾನುವಾರ ಗುಡುಗು ಸಿಡಿಲು ಸಹಿತ ಮಳೆ ಸುರಿಯಿತು.

ಸಂಜೆಯವರೆಗೂ ಬಿರುಬಿಸಿಲಿನ ವಾತಾವರಣವಿದ್ದು, ಏಕಾಏಕಿ ಮೋಡಕವಿದ ವಾತಾವರಣ ಸೃಷ್ಟಿಯಾಯಿತು. ಬಳಿಕ ಕೆಲಹೊತ್ತು ಗುಡುಗಿನ ಅಬ್ಬರದೊಂದಿಗೆ ಮಳೆ ಸುರಿಯಿತು. ಬಿಸಿಲಿನ ದಗೆಗೆ ಕಂಗೆಟ್ಟಿದ್ದವರಿಗೆ ಮಳೆ ತಂಪೆರೆದ ಅನುಭವ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT