ADVERTISEMENT

‘ಸತ್ಯದ ಹುಡುಕಾಟವೇ ವಿಜ್ಞಾನ’

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 10:09 IST
Last Updated 1 ಮಾರ್ಚ್ 2014, 10:09 IST

ಕುಮಟಾ: ‘ಜಗತ್ತಿನ ಹೆಚ್ಚಿನ ಭಾಗ ಮನುಷ್ಯನಿಗೂ ಇನ್ನೂ ನಿಗೂಢ ವಾಗಿಯೇ ಇರುವಾಗ ಸತ್ಯಕ್ಕಾಗಿ ಪ್ರಾಮಾಣಿಕ ಹುಡುಕಾಟ ನಡೆಸು ವುದು ವಿಜ್ಞಾನ ಮಾತ್ರ’ ಎಂದು  ಪರಿಸರ ವಿಜ್ಞಾನಿ ಡಾ.ಎಂ.ಡಿ. ಸುಭಾಶ್ಚಂದ್ರ ಹೇಳಿದರು.

ಪಟ್ಟಣದ ಡಾ.ಎ.ವಿ.ಬಾಳಿಗಾ ಕಲಾ–ವಿಜ್ಞಾನ ಮಹಾವಿದ್ಯಾಲಯ ದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ವಿಜ್ಞಾನ ದಿನ ಉದ್ಘಾಟಿಸಿ ಅವರು ಮಾತನಾಡಿದರು.

‘ವಿಜ್ಞಾನ ಆವಿಷ್ಕಾರದಲ್ಲಿ ತಿರುಗುವ ಚಕ್ರ, ಬರ ವಣಿಗೆ, ವೇದ ಗಣಿತ ಮುಂತಾದವು ಅತ್ಯಂತ ಮಹತ್ತರವಾದ ಕೊಡುಗೆ ಗಳು’ ಎಂದರು.

ಕುವೆಂಪು ವಿ.ವಿ. ರಸಾಯನ ಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ವಸಂತಕುಮಾರ ಪೈ,  ದಾಂಡೇಲಿ ಬಂಗೂರನಗರ ಪದವಿ ಕಾಲೇಜು ಪ್ರಾಧ್ಯಾಪಕ ಡಾ.ಪಿ.ವಿ.ಶಾನಭಾಗ  ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ.ವಿ.ಕೆ.ಹಂಪಿಹೋಳಿ ಅಧ್ಯಕ್ಷತೆ ವಹಿಸಿದ್ದರು.

ಪ್ರಾಧ್ಯಾಪಕ ಡಾ. ಪ್ರಕಾಶ ಪಂಡಿತ ಸ್ವಾಗತಿಸಿದರು. ಅಫ್ರಿನ್‌ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.