ಯಲ್ಲಾಪುರ: ತಾಲ್ಲೂಕಿನ ಹಿಟ್ಟಿನಬೈಲ್ ಬಳಿಯ ‘ಮಹಾರಾಷ್ಟ್ರ ಡಾಬಾ’ ಮುಂದೆ ಗುರುವಾರ, ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾಗಿವೆ. ಒಬ್ಬರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತವಾದ ಲಾರಿಯು ಹೆದ್ದಾರಿಗೆ ಅಡ್ಡಲಾಗಿ ನಿಂತಿದ್ದರಿಂದ ಸ್ವಲ್ಪ ಕಾಲ ವಾಹನಗಳ ಸಂಚಾರದಲ್ಲಿ ವ್ಯತ್ಯಯವುಂಟಾಯಿತು.
ಮಹಾರಾಷ್ಟ್ರದ ನಂದ್ಯಾಡದ ಲೋಹಾ ತಾಲ್ಲೂಕಿನ ಹರನವಾಡದ ಪರಮೇಶ್ವರ ಲಕ್ಕಣದಖಲವಾಡ (25) ಮೃತರು. ಅದೇ ಊರಿನ ರಾಜು ಬಾಬುರಾವ್ ಎಳ್ಳೆ(24), ಮಧ್ಯಪ್ರದೇಶದ ಬೇತೂಲ್ನ ಪಟೇಲವಾಡದವರಾದ ಜಸ್ಪಾಲ್ ಸಿಂಗ್ ಕಸಾರಸಿಂಗ್ (59), ದಿಲೀಪ್ ಮಾರುತಿ ಯವನ (24) ಗಾಯಗೊಂಡವರು. ಗಾಯಾಳುಗಳಿಗೆ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದುಕೊಂಡು ಹೋಗಲಾಗಿದೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.