ADVERTISEMENT

ಅಪಘಾತ: ಬೈಕ್‌ ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 11:20 IST
Last Updated 21 ಸೆಪ್ಟೆಂಬರ್ 2022, 11:20 IST
ಮಂಜುನಾಥ ಗೊಂಡ
ಮಂಜುನಾಥ ಗೊಂಡ   

ಭಟ್ಕಳ: ಪಟ್ಟಣದ ಮಣ್ಕುಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಟಿಪ್ಪರ್‌ ವಾಹನವೊಂದು ನಿಯಂತ್ರಣ ತಪ್ಪಿ, ರಸ್ತೆ ದಾಟಲು ನಿಂತಿದ್ದ ಬೈಕ್‌ ಸವಾರನಿಗೆ ಗುದ್ದಿದ ಪರಿಣಾಮ ಗಂಭೀರ ಗಾಯಗೊಂಡ ಸವಾರ ಮೃತಪಟ್ಟಿದ್ದಾರೆ.

ತಲಾಂದ ಮರಂಬಳ್ಳಿ ನಿವಾಸಿ ಮಂಜುನಾಥ ನಾಗಪ್ಪ ಗೊಂಡ(38) ಮೃತ. ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಈತನು ಎಂದಿನಂತೆ ಕೆಲಸಕ್ಕೆ ತೆರಳಲು ರಸ್ತೆ ದಾಟಲು ಬೈಕ್‌ ನಿಲ್ಲಿಸಿಕೊಂಡಿದ್ದಾಗ ಉಡುಪಿಯಿಂದ ಹೊನ್ನಾವರ ಕಡೆಗೆ ಹೋಗುತ್ತಿದ್ದ ಟಿಪ್ಪರ್‌ ಗಾಡಿ ನಿಯಂತ್ರಣ ತಪ್ಪಿ ಎದುರಿನಲ್ಲಿ ಚಲಿಸುತ್ತಿದ್ದ ಕಾರಿಗೆ ಗುದ್ದಿ ಅಲ್ಲೇ ನಿಂತುಕೊಂಡಿದ್ದ ಬೈಕ್‌ಗೂ ಗುದ್ದಿದೆ. ಟಿಪ್ಪರ್‌ ಮೈಮೇಲೆ ಹರಿದ ಪರಿಣಾಮ ಆಸ್ಪತ್ರೆ ಸಾಗಿಸುವ ಮಾರ್ಗಮಧ್ಯ ಬೈಕ್‌ ಸವಾರ್‌ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.