ADVERTISEMENT

ಒಂದು ವಾರದಲ್ಲಿ ಕೋವಿಡ್ 19 ಘಟಕ

ಕಾರವಾರದ ವೈದ್ಯಕೀಯ ಕಾಲೇಜಿನಲ್ಲಿ ₹ 1 ಕೋಟಿ ವೆಚ್ಚದಲ್ಲಿ ಸ್ಥಾಪನೆ: ಜಿಲ್ಲಾಧಿಕಾರಿ ಹರೀಶಕುಮಾರ್

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 11:12 IST
Last Updated 28 ಮಾರ್ಚ್ 2020, 11:12 IST
ಕಾರವಾರದ ಜಿಲ್ಲಾ ಆಸ್ಪತ್ರೆಯ ಹೊರಭಾಗದಲ್ಲಿ ಕೊರೊನಾ ಸೋಂಕು ಶಂಕಿತರಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ
ಕಾರವಾರದ ಜಿಲ್ಲಾ ಆಸ್ಪತ್ರೆಯ ಹೊರಭಾಗದಲ್ಲಿ ಕೊರೊನಾ ಸೋಂಕು ಶಂಕಿತರಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ   

ಕಾರವಾರ: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಹರಡದಂತೆ ತಡೆಯಲು ಜಿಲ್ಲಾಡಳಿತವು ವ್ಯಾಪಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದ್ದರಿಂದ ಜನರು ಭಯಪಡಬೇಕಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.

ಭಟ್ಕಳದಲ್ಲಿ ಹೇರಲಾಗಿರುವ ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಜಿಲ್ಲಾಡಳಿತವು ಸಮರ್ಥವಾಗಿದೆ. ಇದರ ಭಾಗವಾಗಿಏ.3ರ ಮೊದಲುಕಾರವಾರದ ವೈದ್ಯಕೀಯಕಾಲೇಜು ಆಸ್ಪತ್ರೆಯಲ್ಲಿ (ಕಿಮ್ಸ್) ಕೋವಿಡ್ 19 ಚಿಕಿತ್ಸಾ ಘಟಕವು ಸಿದ್ಧವಾಗಲಿದೆ. ಇದಕ್ಕಾಗಿ ₹ 1 ಕೋಟಿ ರೂಪಾಯಿ ವ್ಯಯಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಘಟಕದಲ್ಲಿ ಏನೇನಿರಲಿವೆ?:‘150ಹಾಸಿಗೆಗಳು ಇರುವ ಈ ಘಟಕದಲ್ಲಿಆಮ್ಲಜನಕ ಪೂರೈಕೆಯೊಂದಿಗೆ ಪ್ರತ್ಯೇಕತಾ ಕೇಂದ್ರ (ಐಸೊಲೇಷನ್ ಸೆಂಟರ್) ವ್ಯವಸ್ಥೆ ಮಾಡಲಾಗಿದೆ. ಕ್ವಾರೆಂಟೈನ್‌ಗಾಗಿ50ಹಾಸಿಗೆ ಹಾಗೂ ಸಂಪರ್ಕ ತಡೆಗೆ 25 ಹಾಸಿಗೆ ಹೊಂದಿದೆ. ಆಸ್ಪತ್ರೆಯಿಂದ ಹೊರಗೆ 10 ಹಾಸಿಗೆಗಳ ಪ್ರತ್ಯೇಕತೀವ್ರ ನಿಗಾ ಘಟಕಇರುತ್ತದೆ.ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಅಧಿಕಾರಿ ಮೊಹಮ್ಮದ್ ರೋಶನ್ ಈ ಎಲ್ಲ ಚಟುವಟಿಕೆಗಳ ಮೇಲೆ ಸಂಪೂರ್ಣ ನಿಗಾ ಇಡಲಿದ್ದಾರೆ’ ಎಂದುಹೇಳಿದ್ದಾರೆ.

ADVERTISEMENT

‘ಸಾರ್ವಜನಿಕರು ಮನೆಗಳಲ್ಲೇಇದ್ದುಕೊಂಡುವಿಶ್ರಾಂತಿ ಪಡೆಯಿರಿ. ಕುಟುಂಬ ಸದಸ್ಯರೊಂದಿಗೆ ನಿಮ್ಮ ವಿರಾಮವನ್ನು ಆನಂದಿಸಿ.ವದಂತಿಹರಡಲು ಯಾವುದೇ ಅವಕಾಶವನ್ನು ನೀಡಬೇಡಿ. ಇದು ಕೋವಿಡ್ 19ನಂತೆಯೇ ಅಪಾಯಕಾರಿ’ ಎಂದು ಜಿಲ್ಲಾಧಿಕಾರಿಮನವಿ ಮಾಡಿದ್ದಾರೆ.

ಉಸ್ತುವಾರಿ ಸಚಿವರ ಸಭೆ ಇಂದು:ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಮಾರ್ಚ್ 29ರಂದು ಕಾರವಾರಕ್ಕೆ ಭೇಟಿ ನೀಡಲಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜೊತೆ ಪರಿಶೀಲನಾ ಸಭೆ ಹಮ್ಮಿಕೊಳ್ಳಲಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿಮಧ್ಯಾಹ್ನ ಒಂದು ಗಂಟೆಗೆ ಸಭೆ ಆಯೋಜಿಸಲಾಗಿದೆ.

ಜಿಲ್ಲಾಡಳಿತದಿಂದ ಆಹಾರದ ವ್ಯವಸ್ಥೆ:ಜಿಲ್ಲೆಯಲ್ಲಿ ಅಗತ್ಯ ತುರ್ತು ಆಹಾರದ ಅಗತ್ಯ ಇರುವವರಿಗೆ ಅಂಗನವಾಡಿಗಳಲ್ಲಿ ಆಹಾರ ಸಿದ್ಧಪಡಿಸಿ ವಿತರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿನಿರ್ಗತಿಕರಿಗೆ, ಆಶ್ರಯವಿಲ್ಲದೇ ತೊಂದರೆಯಲ್ಲಿ ಇರುವವರಿಗೆ ಆಹಾರ ಮತ್ತು ಉಳಿದುಕೊಳ್ಳುವ ತಾತ್ಕಾಲಿಕ ವ್ಯವಸ್ಥೆಯನ್ನುಮಾಡಲಾಗುತ್ತಿದೆ.ಸಹಾಯದ ಅಗತ್ಯವಿರುವಸಾರ್ವಜನಿಕರು ತಮ್ಮ ಹೆಸರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಡಾ.ರಾಜೇಂದ್ರ ಬೇಕಲ್ (ಮೊಬೈಲ್: 98803 01250) ಅವರನ್ನು ಸಂಪರ್ಕಿಸಬಹುದು.

ಹಿಂದುಳಿದ ವರ್ಗಗಳ ಇಲಾಖೆಯ ವಸತಿ ನಿಲಯಗಳಲ್ಲಿ ಆಶ್ರಯ ಮತ್ತು ಆಹಾರದ ವ್ಯವಸ್ಥೆ ಮಾಡಲಾಗಿದ್ದು, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪುರುಷೋತ್ತಮ (ಮೊಬೈಲ್:94838 86886) ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಬಡಿಗೇರ್ (ಮೊಬೈಲ್:94485 08383) ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.