ADVERTISEMENT

ಉತ್ತರ ಕನ್ನಡ: ಸಹಸ್ರಲಿಂಗಕ್ಕೆ ಪ್ರವೇಶ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 6:42 IST
Last Updated 12 ಜನವರಿ 2022, 6:42 IST

ಶಿರಸಿ: ಮಕರ ಸಂಕ್ರಾಂತಿ ಹಬ್ಬ ನಡೆಯುವ ಜ.14 ಮತ್ತು 15 ರಂದು ತಾಲ್ಲೂಕಿನ ಸಹಸ್ರಲಿಂಗಕ್ಕೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಿ ಭೈರುಂಬೆ ಗ್ರಾಮ ಪಂಚಾಯ್ತಿ ಆದೇಶಿಸಿದೆ.

ಹಬ್ಬದ ಸಂದರ್ಭದಲ್ಲಿ ಇಲ್ಲಿನ ಶಾಲ್ಮಲಾನದಿಯಲ್ಲಿ ಪುಣ್ಯಸ್ನಾನ ಮಾಡಿ, ಶಿವಲಿಂಗಗಳಿಗೆ ಪೂಜೆ ಸಲ್ಲಿಸಲು ಭಕ್ತರ ದಂಡು ಹರಿದುಬರುತ್ತದೆ. ಹೊರಜಿಲ್ಲೆಗಳಿಂದಲೂ ಸಾಕಷ್ಟು ಜನರು ಬರುತ್ತಾರೆ. ಕೋವಿಡ್ ನಿಯಮಾವಳಿ ಪಾಲನೆ ಸಲುವಾಗಿ ಜನ ದಟ್ಟಣೆ ತಡೆಯಲು ನಿರ್ಬಂಧ ವಿಧಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಘವೇಂದ್ರ ನಾಯ್ಕ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT