ಕಾರವಾರ: ಲಾಕ್ಡೌನ್ನಿಂದಾಗಿ ದೇಶದ ವಿವಿಧೆಡೆ ಬಾಕಿಯಾಗಿದ್ದ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕರೆದುಕೊಂಡು ಹೋಗಲು ಕೊಂಕಣ ರೈಲ್ವೆಯ ಒಟ್ಟು50 ‘ಶ್ರಮಿಕ್ ಎಕ್ಸ್ಪ್ರೆಸ್’ ರೈಲುಗಳು ಈವರೆಗೆ ಸಂಚರಿಸಿವೆ.
ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯ ಸರ್ಕಾರಗಳ ಕೋರಿಕೆಯ ಮೇರೆಗೆ ಈ ರೈಲುಗಳ ಸಂಚಾರಕ್ಕೆ ನಿಗಮವು ವ್ಯವಸ್ಥೆ ಮಾಡಿದೆ. ಒಟ್ಟು67,178 ಕಾರ್ಮಿಕರು ಪ್ರಯಾಣಿಸಿದ್ದಾರೆ. ಅವರಲ್ಲಿ ಉಡುಪಿ, ಮಡಗಾಂ, ಥಿವಿಮ್, ಕರ್ಮಾಲಿ, ಸಿಂಧುದುರ್ಗ, ರತ್ನಗಿರಿ ಹಾಗೂ ಚಿಪ್ಲುನ್ ನಿಲ್ದಾಣಗಳಿಂದ ಕಾರ್ಮಿಕರು ರೈಲನ್ನೇರಿದ್ದರು ಎಂದು ಕೊಂಕಣ ರೈಲ್ವೆ ನಿಗಮದ ಸಾರ್ವಜನಿಕ ಸಂಪರ್ಕ ವಿಭಾಗದ ವ್ಯವಸ್ಥಾಪಕಿ ಕೆ.ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.