ADVERTISEMENT

ಉತ್ತರ ಕನ್ನಡ | ಕೋವಿಡ್–19‌ನಿಂದ ಐವರು ಗುಣಮುಖ

​ಪ್ರಜಾವಾಣಿ ವಾರ್ತೆ
Published 26 ಮೇ 2020, 12:24 IST
Last Updated 26 ಮೇ 2020, 12:24 IST
ಕೋವಿಡ್ 19 ಸೋಂಕಿನಿಂದ ಗುಣಮುಖರಾದವರನ್ನು ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಅಧಿಕಾರಿಗಳು ಬೀಳ್ಕೊಟ್ಟರು
ಕೋವಿಡ್ 19 ಸೋಂಕಿನಿಂದ ಗುಣಮುಖರಾದವರನ್ನು ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಅಧಿಕಾರಿಗಳು ಬೀಳ್ಕೊಟ್ಟರು   

ಕಾರವಾರ: ಕೋವಿಡ್–19ನಿಂದ ಗುಣಮುಖರಾದ ಐವರು ಇಲ್ಲಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್ ವಾರ್ಡ್‌ನಿಂದ ಮಂಗಳವಾರ ಬಿಡುಗಡೆಯಾದರು.ಇವರಲ್ಲಿ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಮತ್ತು 17 ವರ್ಷದ ಬಾಲಕಿಯೊಬ್ಬಳು ಸೇರಿದ್ದಾರೆ.

ಹಸುಗೂಸಿನ ತಾಯಿಗೆ ಸೋಂಕು ದೃಢಪಟ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದೃಷ್ಟವಶಾತ್ ಮಗುವಿಗೆ ಸೋಂಕು ಕಾಣಿಸಿಕೊಂಡಿರಲಿಲ್ಲ. ಇಷ್ಟುದಿನ ತಾಯಿಯಿಂದ ಬೇರ್ಪಟ್ಟಿದ್ದ ಮಗು, ಮಂಗಳವಾರ ಅಮ್ಮನ ಮಡಿಲು ಸೇರಿದ ಭಾವುಕ ಕ್ಷಣಕ್ಕೂ ಸಂಸ್ಥೆಯ ವೈದ್ಯರು ಮತ್ತುಸಿಬ್ಬಂದಿ ಸಾಕ್ಷಿಯಾದರು.

ಗುಣಮುಖರಾದವರಿಗೆ ಸಂಸ್ಥೆಯ ಡೀನ್ ಡಾ.ಗಜಾನನ ನಾಯಕ, ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಲಕರ್ ಹಾಗೂ ಸಿಬ್ಬಂದಿ ಚಪ್ಪಾಳೆ ತಟ್ಟಿ, ಹೂ ಮತ್ತು ಪ್ರಮಾಣಪತ್ರ ನೀಡಿ ಭಟ್ಕಳದ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಿಕೊಟ್ಟರು.

ADVERTISEMENT

ಜಿಲ್ಲೆಯಲ್ಲಿ ಮಂಗಳವಾರಕೋವಿಡ್–19ನ ಹೊಸ ಪ್ರಕರಣಗಳು ವರದಿಯಾಗದ ಕಾರಣ ಜಿಲ್ಲೆಯ ಜನ ಸ್ವಲ್ಪ ನಿರಾಳರಾದರು. ಈವರೆಗೆ ಜಿಲ್ಲೆಯಲ್ಲಿ38ಮಂದಿ ಗುಣಮುಖರಾಗಿದ್ದು, 31 ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.