ADVERTISEMENT

ಉತ್ತರ ಕನ್ನಡ | ಯಲ್ಲಾಪುರ: ಮಣ್ಣು ಕುಸಿತ; ನಾಲ್ವರು ಕೂಲಿ ಕಾರ್ಮಿಕರು ಸಾವು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 13:57 IST
Last Updated 8 ಮಾರ್ಚ್ 2021, 13:57 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಯಲ್ಲಾಪುರ: ತಾಲ್ಲೂಕಿನ ಇಡಗುಂದಿ ಗ್ರಾಮದ ಸಂಪೇಬೈಲ್‌ನಲ್ಲಿ ಸೋಮವಾರಗುಡ್ಡದ ಮಣ್ಣು ಕುಸಿದು ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ.

ತಾಲ್ಲೂಕಿನ ಕಿರವತ್ತಿ ಬಳಿಯ ಹೊಸಳ್ಳಿ ಗ್ರಾಮದ ಭಾಗ್ಯಶ್ರೀ ಯಡಗೆ (21), ಲಕ್ಷ್ಮೀ ದೋಯಿಪಡೆ (38), ಸಂತೋಷ ದೋಯಿಪಡೆ (18) ಹಾಗೂ ಮಾಳು ದೋಯಿಪಡೆ (21) ಮೃತರು.

ಸಂಜೆಯ ವೇಳೆಗೆ ಗುಡ್ಡದ ಮೇಲಿನ ಮಣ್ಣನ್ನು ಅರ್ಧ ತೆರವು ಮಾಡಿದ್ದ ಕಾರ್ಮಿಕರು, ನೀರು ಕುಡಿಯಲೆಂದು ಕೆಳಗೆ ಬಂದು ಕುಳಿತಿದ್ದರು. ಆಗ ಭಾರಿ ಪ್ರಮಾಣದಲ್ಲಿ ಮಣ್ಣು ಏಕಾಏಕಿ ಕುಸಿದು ಕಾರ್ಮಿಕರು ಅದರ ಕೆಳಗೆ ಸಿಲುಕಿದರು.

ADVERTISEMENT

ಮಂಜುನಾಥ ನಾಗಪ್ಪ ಭಟ್ ಎಂಬುವವರ ತೋಟದಲ್ಲಿ ಈ ಅವಘಡ ನಡೆದಿದೆ. ಅಲ್ಲಿ ಒಟ್ಟು ಏಳು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಯಲ್ಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.