ADVERTISEMENT

ಕಾರವಾರ: ನೌಕಾನೆಲೆ ಪ್ರವೇಶಿಸಿದ ಅಪರಿಚಿತರಿಗೆ ಹುಡುಕಾಟ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 15:32 IST
Last Updated 8 ಸೆಪ್ಟೆಂಬರ್ 2022, 15:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಾರವಾರ: ಇಲ್ಲಿನ ಐಎನ್ಎಸ್ ಕದಂಬ ನೌಕಾನೆಲೆಯ ನಿಷೇಧಿತ ಪ್ರದೇಶಕ್ಕೆ ಸೆ.1ರಂದು ಸಂಜೆ 7.40ರ ಸುಮಾರಿಗೆ ನಾಲ್ವರು ಅಪರಿಚಿತರು ಪ್ರವೇಶಿಸಿದ್ದಾರೆ. ಅವರ ಚಲನವಲನಗಳು ಭದ್ರತಾ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.

ನೌಕಾನೆಲೆ ವ್ಯಾಪ್ತಿಯಲ್ಲಿರುವ ಕೊಡಾರ ಕಡಲತೀರದ ಬಳಿ ಸಮುದ್ರ ದಡದಲ್ಲಿ ನಾಲ್ವರು ಇದ್ದ ದೃಶ್ಯಗಳು ದಾಖಲಾಗಿವೆ. ಅದನ್ನು ಆಧರಿಸಿ, ನೌಕಾನೆಲೆಯ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಹುಡುಕಾಡಿದಾಗ ಅಲ್ಲಿ ಯಾರೂ ಕಂಡುಬಂದಿಲ್ಲ.

ಈ ಬಗ್ಗೆ ನೌಕಾನೆಲೆಯ ಲೆಫ್ಟಿನೆಂಟ್ ಆಫೀಸರ್ ದಿ ಕಮಾಂಡಿಂಗ್ ಆಫೀಸರ್ ಆಶುತೋಷ್ ತಿವಾರಿ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಗೆ ಗುರುವಾರ ದೂರು ನೀಡಿದ್ದಾರೆ. ಕೋಸ್ಟಲ್ ಪೊಲೀಸರು ಹಾಗೂ ಗುಪ್ತಚರ ಇಲಾಖೆಯ ಸಹಕಾರದೊಂದಿಗೆ ತನಿಖೆ ನಡೆಸಿ, ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸುವಂತೆ ಅವರು ಕೋರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.