
ಪ್ರಜಾವಾಣಿ ವಾರ್ತೆ
ಕಾರವಾರ:ಇಲ್ಲಿನ ಸೀಬರ್ಡ್ ನೌಕಾನೆಲೆಗೆ ಗೋವಾ ರಾಜ್ಯಪಾಲರಾದ ಮೃದುಲಾ ಸಿನ್ಹಾ ಏ.24ರಿಂದ 26ರವರೆಗೆ ಪ್ರವಾಸ ಬಂದಿದ್ದರು. ನೌಕಾನೆಲೆಯ ವಿವಿಧ ಯೋಜನೆಗಳು, ಕಾಮಗಾರಿಗಳ ಬಗ್ಗೆ ನೌಕಾಪಡೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಇದೇವೇಳೆ ಅವರು, ನೌಕೆಗಳ ನಿರ್ವಹಣೆ, ಯುದ್ಧ ನೌಕೆಗಳನ್ನು ಮೇಲೆತ್ತುವ ವ್ಯವಸ್ಥೆ ವೀಕ್ಷಿಸಿದರು. ‘ಐಎನ್ಎಸ್ ತಲ್ವಾರ್’ ಹಡಗಿಗೆಭೇಟಿ ನೀಡಿ, ಅದರ ಸಿಬ್ಬಂದಿ ಜತೆ ಮಾತುಕತೆ ನಡೆಸಿದರು. ನೌಕಾನೆಲೆಯ ವ್ಯಾಪ್ತಿಯ ಸಮುದ್ರದಲ್ಲಿ ದೋಣಿಯಲ್ಲಿ ಪ್ರಯಾಣಿಸಿದ ಅವರು, ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ವೀಕ್ಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.