ಕಾರವಾರ: ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ನಗರದ ಆಶಾನಿಕೇತನ ಮತ್ತು ನವ್ಯಜ್ಯೋತಿ ನಿಲಯಂ ಅಂಗವಿಕಲ ಮಕ್ಕಳ ಶಾಲೆಯ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿ ಆತ್ಮವಿಶ್ವಾಸ ತುಂಬಿದರು.
ಕದಂಬ ನೌಕಾನೆಲೆಗೆ ಬುಧವಾರ ಭೇಟಿ ನೀಡಿದ್ದ ವೇಳೆ ಅಲ್ಲಿಗೆ ಬಂದಿದ್ದ ಮಕ್ಕಳೊಂದಿಗೆ ಕೆಲ ಹೊತ್ತು ಕಳೆದ ಅವರು ವಿದ್ಯಾರ್ಥಿಗಳೊಂದಿಗೆ ಫೋಟೊ ತೆಗೆಸಿಕೊಂಡು ಖುಷಿಪಟ್ಟರು.
ಇದಕ್ಕೂ ಮೊದಲು ನೌಕಾಪಡೆಯ ಚೇತಕ್ ಹೆಲಿಕ್ಯಾಪ್ಟರ್ ಮತ್ತು ನೌಕಾದಳದ ಬ್ಯಾಂಡ್ನಿಂದ ಗೌರವ ವಂದನೆ ಸ್ವೀಕರಿಸಿದರು. ಅಂಜದೀವ್ ದ್ವೀಪದಲ್ಲಿ ವಿಜಯ ದಿನದ ಸಂಕೇತವಾಗಿ 100 ಅಡಿ ಎತ್ತರದ ಧ್ವಜಕಂಬದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದರು. ನೌಕಾಪಡೆಯ ಕುರಿತ ಕಿರು ಚಿತ್ರ ಮತ್ತು ನೌಕಾ ಪಡೆಯ ಶಾಲೆಯ ವಿದ್ಯಾರ್ಥಿಗಳಿಂದ ದೇಶ ಭಕ್ತಿಯ ಕುರಿತ ನೃತ್ಯ ಪ್ರದರ್ಶನ ವೀಕ್ಷಿಸಿದರು.
ರಿಯರ್ ಅಡ್ಮಿರಲ್ ಕೆ.ಎಂ.ರಾಮಕೃಷ್ಣನ್, ಕಮೋಡೋರ್ ಆಶೀಸ್ ಗೋಯಲ್, ನಿತೀನ್ ನಗೈ, ಕದಂಬ ನೌಕಾನೆಲೆಯ ಕ್ಯಾಪ್ಟನ್ ವಿವೇಕ್ ಸಿಂಗ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.