ಕಾರವಾರ: ಪೊಲೀಸ್ ಇಲಾಖೆಯ 'ನಿರ್ಭಯಾ' ಯೋಜನೆಯಡಿ ಜಿಲ್ಲೆಯ 'ಶರಾವತಿ ಪಡೆ'ಗೆ 25 ದ್ವಿಚಕ್ರ ವಾಹನಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಂಗಳವಾರ ಹಸ್ತಾಂತರಿಸಿದರು.
ವಾಹನಗಳ ಸಂಚಾರಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಹಸಿರು ನಿಶಾನೆ ತೋರಿ ಮಾತನಾಡಿದ ಅವರು, 'ಜಿಲ್ಲೆಯ ಐದೂ ಉಪ ವಿಭಾಗಗಳಿಗೆ ಈ ವಾಹನಗಳನ್ನು ಹಂಚಿಕೆ ಮಾಡಿ ಪೊಲೀಸ್ ಮಹಾನಿರ್ದೇಶಕರು ಸೂಚಿಸಿದ್ದಾರೆ. ಮಹಿಳೆಯರಿಗೆ ಮತ್ತು ಮಕ್ಕಳಿಗೆ ತೊಂದರೆಯಾದಾಗ ಮಹಿಳಾ ಸಿಬ್ಬಂದಿಯೇ ಖುದ್ದು ಹಾಜರಾಗಲು ಈ ವಾಹನಗಳು ಸಹಕಾರಿಯಾಗಲಿವೆ' ಎಂದು ತಿಳಿಸಿದರು.
'ಇವುಗಳನ್ನು ಕೇವಲ ಕಚೇರಿ ಸಲುವಾಗಿ ಬಳಕೆ ಮಾಡಬೇಕು. ಇಂಧನ ಬಳಕೆಯ ಮಿತಿ ಇರುತ್ತದೆ. ಎಷ್ಟು ಕಿಲೋಮೀಟರ್ ಸಂಚರಿಸಿದೆ ಎಂಬ ಮಾಹಿತಿಯೂ ಪಡೆಯಲಾಗುತ್ತದೆ' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.