ಕಾರವಾರ:ನಗರದ ಹಬ್ಬುವಾಡ ರಾಘವೇಂದ್ರ ಮಠದ ಸಮೀಪದ ಮುಖ್ಯರಸ್ತೆಯಲ್ಲಿ ಹೆಬ್ಬಾವೊಂದರ ಕಳೇಬರ ಸೋಮವಾರಪತ್ತೆಯಾಗಿದೆ.
ಮನೆಯೊಂದರ ಮುಂದೆ ಚರಂಡಿಯಿಂದ ಮೇಲೆ ಬಂದಿದ್ದ ಅದರ ತಲೆಯ ಭಾಗಕ್ಕೆ ಸಣ್ಣ ಗಾಯವಾಗಿತ್ತು. ಅದರ ಮೇಲೆ ಯಾವುದಾದರೂ ವಾಹನ ಹೋಗಿ ಏಟಾಗಿರುವ ಸಾಧ್ಯತೆಯಿದೆ. ಹಾವಿಗೆ ಅಂದಾಜು ಎರಡು ವರ್ಷ ಪ್ರಾಯವಿರಬಹುದು.ಅದನ್ನು ಪರಿಶೀಲಿಸಿದ ಬಳಿಕ ಮಣ್ಣಿನಲ್ಲಿ ಹೂಳಲಾಯಿತು ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ರಾಘವೇಂದ್ರ ನಾಯ್ಕ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.