ಕಾರವಾರ: ಕುಮಟಾ ತಾಲ್ಲೂಕಿನ ಕುಗ್ರಾಮ ಮೇದಿನಿಯಲ್ಲಿ 15ಕ್ಕೂ ಹೆಚ್ಚು ಯುವಕರು ಮದುವೆಯಾಗದೇ ಪರಿತಪಿಸುತ್ತಿದ್ದಾರೆ. ಗ್ರಾಮದ ದುರ್ಗಮ ರಸ್ತೆಯೇ ಅವರ ಕಂಕಣ ಭಾಗ್ಯಕ್ಕೆ ಮುಳುವಾಗಿದೆ!
ಈ ಗ್ರಾಮವು ಭೌಗೋಳಿಕವಾಗಿ ಅತಿ ಎತ್ತರದ ಪ್ರದೇಶದಲ್ಲಿದೆ. ತಲುಪಲುಸರಿಯಾದ ರಸ್ತೆಯೂ ಇಲ್ಲ. ಗ್ರಾಮ ತಲುಪಬೇಕೆಂದರೆ 8 ಕಿ.ಮೀ. ದುರ್ಗಮ ರಸ್ತೆಯಲ್ಲಿಯೇ ಸಾಗಬೇಕು. ‘ಯಾವುದೇ ಸೌಲಭ್ಯಗಳು ಇಲ್ಲದಿರುವುದರಿಂದ ಗ್ರಾಮದಯುವಕರಿಗೆ ಹೆಣ್ಣು ಕೊಡಲು ಹಿಂಜರಿಯುತ್ತಿದ್ದಾರೆ. ‘ಮೇದಿನಿ’ಯ ಹೆಸರು ಹೇಳುತ್ತಿದ್ದಂತೆ ಅನೇಕರ ವಿವಾಹ ಸಂಬಂಧಗಳ ಪ್ರಸ್ತಾವಮುರಿದು ಬಿದ್ದಿರುವ ಉದಾಹರಣೆಗಳೂ ಇವೆ’ ಎನ್ನುತ್ತಾರೆ ಗ್ರಾಮಸ್ಥ ಶಿವರಾಮಗೌಡ.
ಕಡಿದಾದ ದಾರಿ: ಕುಮಟಾ– ಸಿದ್ದಾಪುರ ಮುಖ್ಯ ರಸ್ತೆಯಿಂದಈ ಗ್ರಾಮಕ್ಕೆ ದಟ್ಟ ಅರಣ್ಯದ ನಡುವೆ ಸಾಗಬೇಕು. ಈ ಹಿಂದೆ ಗ್ರಾಮಸ್ಥರೇ ಮಾಡಿಕೊಂಡಿರುವ ಕಚ್ಚಾ ರಸ್ತೆಯೊಂದೇ ಇಲ್ಲಿಗೆ ಸಂಪರ್ಕ ಕಲ್ಪಿಸುತ್ತಿದೆ. ಗ್ರಾಮಕ್ಕೆ ಕಿರಿಯ ಪ್ರಾಥಮಿಕ ಶಾಲೆ ಇದೆ. ಮೂರು ವರ್ಷಗಳ ಹಿಂದೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಮಳೆಗಾಳಿ ಬೀಸಿದರೆ ವಿದ್ಯುತ್ ವ್ಯತ್ಯಯವಾಗುವುದು ಅತಿ ಸಹಜ. ಮೊಬೈಲ್ ನೆಟ್ವರ್ಕ್ ಕೂಡ ಸಿಗದ ಈ ಊರಿನವರೊಂದಿಗೆ ಸಂಪರ್ಕ ಸಾಧಿಸುವುದೇ ಕಷ್ಟವಾಗಿದೆ.
ಬರುವೆನೆಂದ ಸಿ.ಎಂ. ಬರಲಿಲ್ಲ
‘ಲೋಕಸಭಾಚುನಾವಣಾ ಪ್ರಚಾರಕ್ಕೆಜಿಲ್ಲೆಯಗೋಕರ್ಣದಲ್ಲಿ ಬಂದು ತಂಗಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಗ್ರಾಮಸ್ಥರು ಭೇಟಿ ಮಾಡಿ, ಸಮಸ್ಯೆ ಹೇಳಿಕೊಂಡಿದ್ದರು. ಗ್ರಾಮಕ್ಕೆತಾವೇಖುದ್ದಾಗಿ ಬಂದು ಗ್ರಾಮ ವಾಸ್ತವ್ಯ ಮಾಡುವುದಾಗಿ ಭರವಸೆ ನೀಡಿದ್ದರು.ರಸ್ತೆ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಚರ್ಚಿಸಿ, ಕ್ರಮ ಕೈಗೊಳ್ಳುವುದಾಗಿಯೂ ಹೇಳಿದ್ದರು. ಆದರೆ, ಇದೀಗ ಮುಖ್ಯಮಂತ್ರಿ ಗ್ರಾಮ ವಾಸ್ತವ್ಯದ ಪಟ್ಟಿಯಲ್ಲಿ ನಮ್ಮ ಗ್ರಾಮದ ಹೆಸರೇ ಇಲ್ಲ’ ಎಂದುಶಿವರಾಮ ಗೌಡ ಬೇಸರ ವ್ಯಕ್ತಪಡಿಸಿದರು.
‘ಮೇದಿನಿ ಸಣ್ಣಕ್ಕಿ’ಯೆಂದರೆ ಪ್ರಸಿದ್ಧಿ
ಪಾಯಸ, ಕೇಸರಿಬಾತ್ಗೆ ಹೆಚ್ಚಾಗಿ ಬಳಸುವ ‘ಮೇದಿನಿ ಸಣ್ಣಕ್ಕಿ’ ಇದೇ ಗ್ರಾಮದ ವಿಶೇಷ. ಇದರ ಜತೆಗೆ, ಉಪ್ಪಂಗಿ, ಜೇನು, ಮೆಣಸಿನ ಕಾಳು, ಪತ್ರೆ ಸೇರಿದಂತೆ ಕಿರು ಉತ್ಪನ್ನಗಳಿಂದ ಇಲ್ಲಿನಗ್ರಾಮಸ್ಥರಿಗೆಆದಾಯವಿದೆ. ಆದರೆ,ರಸ್ತೆ ಇಲ್ಲದ ಕಾರಣಇಲ್ಲಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸಲಾಗುತ್ತಿಲ್ಲ. ಹೀಗಾಗಿ ಉತ್ತಮ ಬೆಲೆಯೂಸಿಗುತ್ತಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.