ADVERTISEMENT

ಕೆಡಿಸಿಸಿ ಚುನಾವಣೆ: ಮೋಹನ ನಾಯಕ ಗೆಲುವು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 7:27 IST
Last Updated 27 ಡಿಸೆಂಬರ್ 2025, 7:27 IST
ಕೆಡಿಸಿಸಿ ಬ್ಯಾಂಕ್ ಅರ್ಬನ್ ಹಾಗೂ ಕೃಷಿಯೇತರ ಸಹಕಾರಿ ಸಂಘಗಳ ಮತಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ಮೋಹನ ನಾಯಕ ಗೆಲುವು ದಾಖಲಿಸಿದ್ದು, ಉಪವಿಭಾಗಾಧಿಕಾರಿ ಕಾವ್ಯರಾಣಿ ಕೆ. ಪ್ರಮಾಣಪತ್ರ ವಿತರಿಸಿದರು.
ಕೆಡಿಸಿಸಿ ಬ್ಯಾಂಕ್ ಅರ್ಬನ್ ಹಾಗೂ ಕೃಷಿಯೇತರ ಸಹಕಾರಿ ಸಂಘಗಳ ಮತಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ಮೋಹನ ನಾಯಕ ಗೆಲುವು ದಾಖಲಿಸಿದ್ದು, ಉಪವಿಭಾಗಾಧಿಕಾರಿ ಕಾವ್ಯರಾಣಿ ಕೆ. ಪ್ರಮಾಣಪತ್ರ ವಿತರಿಸಿದರು.   

ಶಿರಸಿ: ಧಾರವಾಡ ಹೈಕೋರ್ಟ್ ಸೂಚನೆಯ ಮೇರೆಗೆ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಆಪರೇಟಿವ್ (ಕೆಡಿಸಿಸಿ) ಬ್ಯಾಂಕ್‌ನ ಮತ ಎಣಿಕೆಯ ಅರ್ಬನ್ ಹಾಗೂ ಕೃಷಿಯೇತರ ಸಹಕಾರಿ ಸಂಘಗಳ ಮತಕ್ಷೇತ್ರದ ನಿರ್ದೇಶಕ ಸ್ಥಾನದ ಮತ ಎಣಿಕೆ ಶುಕ್ರವಾರ ನಡೆದಿದ್ದು, ಮೋಹನ ನಾಯಕ ಗೆಲುವು ದಾಖಲಿಸಿದ್ದಾರೆ. 

ಈ ಮತಕ್ಷೇತ್ರ ತೀವ್ರ ಕುತೂಹಲ ಮೂಡಿಸಿತ್ತು. ಮೋಹನ ನಾಯಕ 120 ಮತಗಳನ್ನು ಪಡೆದು ವಿಜಯಿಯಾದರೆ ಹಾಲಿ ನಿರ್ದೇಶಕ ಮೋಹನದಾಸ ನಾಯಕ 105 ಮತಗಳನ್ನು ಪಡೆದು ಪರಾವಭವಗೊಂಡರು. ಇನ್ನೋರ್ವ ಸ್ಪರ್ಧಿ ವಸಂತ ನಾಯಕ 24 ಮತಗಳನ್ನು ಪಡೆದರೆ ಸರಸ್ವತಿ ಎನ್. ರವಿ 5 ಮತಗಳನ್ನು ಪಡೆದು ಪರಾಭವಗೊಂಡರು. ಶಿರಸಿ ಉಪವಿಭಾಗಾಧಿಕಾರಿ ಕಾವ್ಯರಾಣಿ ಕೆ. ಚುನಾವಣಾ ಅಧಿಕಾರಿಯಾರಿಯಾಗಿ ಕಾರ್ಯ ನಿರ್ವಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT