ಶಿರಸಿ: ಸಮುದಾಯಕ್ಕೊಂದು, ಭಾಷೆಗೊಂದು ನಿಗಮ ಸ್ಥಾಪಿಸಿ ಸಮಾಜ ಒಡೆಯುವುದು ಮುಖ್ಯಮಂತ್ರಿ ಕೆಲಸ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಮುಖಂಡರ ಸಭೆ ನಡೆಸಲು ನಗರಕ್ಕೆ ಭೇಟಿ ನೀಡಿರುವ ಅವರು ಮಾಧ್ಯಮದವರ ಜತೆ ಮಾತನಾಡಿದರು. ಸಮಾಜದಲ್ಲಿ ಏಕತೆ ಕಾಯ್ದುಕೊಳ್ಳುವುದು ಕಾಂಗ್ರೆಸ್ ಅಜೆಂಡಾ. ನಾವು ಸಮಾಜ ಒಡೆಯುವ ಸಿದ್ಧಾಂತದ ವಿರುದ್ಧ. ಆದರೆ ಬಿಜೆಪಿಯವರಿಗೆ ಒಡೆದು ಆಳುವುದು ರೂಢಿ ಎಂದರು.
ನ. 30ರಂದು ಪಕ್ಷದ ಮುಖಂಡರ ಸಭೆ ನಡೆಯಲಿದೆ. ಆ ವೇಳೆ ಸರ್ಕಾರದ ನಡೆಯ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.