ADVERTISEMENT

ಸಮಾಜ ಒಡೆಯುವುದು ಮುಖ್ಯಮಂತ್ರಿ ಕೆಲಸ: ಡಿ.ಕೆ. ಶಿವಕುಮಾರ್ 

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 7:12 IST
Last Updated 28 ನವೆಂಬರ್ 2020, 7:12 IST
ಮುಖಂಡರ ಸಭೆ ನಡೆಸಲು ನಗರಕ್ಕೆ ಭೇಟಿ ನೀಡಿರುವ ಡಿ.ಕೆ. ಶಿವಕುಮಾರ್
ಮುಖಂಡರ ಸಭೆ ನಡೆಸಲು ನಗರಕ್ಕೆ ಭೇಟಿ ನೀಡಿರುವ ಡಿ.ಕೆ. ಶಿವಕುಮಾರ್   

ಶಿರಸಿ: ಸಮುದಾಯಕ್ಕೊಂದು, ಭಾಷೆಗೊಂದು ನಿಗಮ ಸ್ಥಾಪಿಸಿ ಸಮಾಜ ಒಡೆಯುವುದು ಮುಖ್ಯಮಂತ್ರಿ ಕೆಲಸ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಮುಖಂಡರ ಸಭೆ ನಡೆಸಲು ನಗರಕ್ಕೆ ಭೇಟಿ ನೀಡಿರುವ ಅವರು ಮಾಧ್ಯಮದವರ ಜತೆ ಮಾತನಾಡಿದರು. ಸಮಾಜದಲ್ಲಿ ಏಕತೆ ಕಾಯ್ದುಕೊಳ್ಳುವುದು ಕಾಂಗ್ರೆಸ್ ಅಜೆಂಡಾ. ನಾವು ಸಮಾಜ ಒಡೆಯುವ ಸಿದ್ಧಾಂತದ ವಿರುದ್ಧ. ಆದರೆ ಬಿಜೆಪಿಯವರಿಗೆ ಒಡೆದು ಆಳುವುದು ರೂಢಿ ಎಂದರು.

ನ. 30ರಂದು ಪಕ್ಷದ ಮುಖಂಡರ ಸಭೆ ನಡೆಯಲಿದೆ. ಆ ವೇಳೆ ಸರ್ಕಾರದ ನಡೆಯ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.