ADVERTISEMENT

ಕುಮಟಾ ಪುರಸಭೆ ನೌಕರ ನಾಪತ್ತೆ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 0:20 IST
Last Updated 9 ಅಕ್ಟೋಬರ್ 2025, 0:20 IST
ವೆಂಕಟೇಶ ಹರಿಜನ
ವೆಂಕಟೇಶ ಹರಿಜನ   

ಭಟ್ಕಳ (ಉತ್ತರ ಕನ್ನಡ): ಕುಮಟಾ ಪುರಸಭೆಯಲ್ಲಿ ಕಂದಾಯ ಅಧಿಕಾರಿ ಆಗಿದ್ದ ಪಟ್ಟಣದ ಕೋಟೇಶ್ವರ ರಸ್ತೆಯ ಹರಿಜನ ಕಾಲೊನಿಯ ವೆಂಕಟೇಶ ಆರ್.ಹರಿಜನ (25) ನಾಪತ್ತೆಯಾದ ಬಗ್ಗೆ ಶಹರ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.

‘ಪುರಸಭೆಯ ಮುಖ್ಯಾಧಿಕಾರಿ ನಿರಂತರ ಮಾನಸಿಕ ಒತ್ತಡ ಹೇರಿ ಕಿರುಕುಳ ನೀಡುತ್ತಿದ್ದರು. ಕೆಲಸ ಮಾಡಲಾಗದೆ, ನೊಂದಿದ್ದೇನೆ. ಮನೆ ಬಿಟ್ಟು ದೂರ ಹೋಗುತ್ತಿದ್ದೇನೆಂದು ಪತ್ರ ಬರೆದಿಟ್ಟು ಪುತ್ರ ಮಂಗಳವಾರ ಮಧ್ಯರಾತ್ರಿ ಮನೆಯಿಂದ ನಾಪತ್ತೆಯಾಗಿದ್ದಾನೆ’ ಎಂದು ನೌಕರನ ತಾಯಿ ಆಶಾ ಹರಿಜನ ದೂರು ನೀಡಿದ್ದಾರೆ. ‘ವೆಂಕಟೇಶ್ ಬರೆದ ಪತ್ರ ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT