ಕಾರವಾರ: ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆಗೊಳಿಸಬೇಕು ಎಂಬ ಬೇಡಿಕೆ ಮುಂದಿಟ್ಟು ಕುಣಬಿ ಸಮುದಾಯದವರು ಕೈಗೊಂಡಿರುವ ಪಾದಯಾತ್ರೆಯಲ್ಲಿ ಗೋವಾ ವಿಧಾನಸಭೆ ಅಧ್ಯಕ್ಷ ರಮೇಶ ಥಾವಡ್ಕರ್ ಪಾಲ್ಗೊಂಡಿದ್ದಾರೆ.
ನಗರಕ್ಕೆ ಶುಕ್ರವಾರ ತಲುಪಿದ ಪಾದಯಾತ್ರೆಗೆ ಇಲ್ಲಿನ ದಿವೇಕರ ವಾಣಿಜ್ಯ ಕಾಲೇಜಿನ ಸಮೀಪ ಥಾವಡ್ಕರ್ ಜತೆಗೂಡಿದರು. ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲುನಡಿಗೆ ಮೂಲಕ ಸಾಗಿದರು.
ಕುಣಬಿ ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ಕುಣಬಿಗಳು ಜ.18 ರಂದು ಜೋಯಿಡಾದಿಂದ ಪಾದಯಾತ್ರೆ ಆರಂಭಿಸಿದ್ದರು. ಮೂರು ದಿನಗಳ ಕಾಲ ನಡಿಗೆ ಮೂಲಕ 70 ಕಿ.ಮೀ. ದೂರದ ಕಾರವಾರಕ್ಕೆ ತಲುಪಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.