ADVERTISEMENT

ಅರಬೈಲ್ ಘಟ್ಟದಲ್ಲಿ‌ ಪ್ರಪಾತಕ್ಕೆ ಉರುಳಿದ ಲಾರಿ: ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 12:28 IST
Last Updated 17 ಸೆಪ್ಟೆಂಬರ್ 2022, 12:28 IST
   

ಯಲ್ಲಾಪುರ: ತಾಲ್ಲೂಕಿನ ಅರಬೈಲ್ ಘಟ್ಟದ ‘ಯು’ ತಿರುವಿನಲ್ಲಿ ಶನಿವಾರ ಲಾರಿಯೊಂದು ಪ್ರಪಾತಕ್ಕೆ ಉರುಳಿ ಚಾಲಕ ಮತ್ತು ಸಹಚಾಲಕ ಮೃತಪಟ್ಟಿದ್ದಾರೆ. ಲಾರಿಯಲ್ಲಿ ಮಂಗಳೂರಿನತ್ತ ಗ್ರಾನೈಟ್ ಸಾಗಿಸಲಾಗುತ್ತಿತ್ತು.

ಆಂಧ್ರಪ್ರದೇಶದ ನೋಂದಣಿ ಸಂಖ್ಯೆ ಹೊಂದಿರುವ ಲಾರಿಯು ಕಡಿದಾದ ತಿರುವಿನಲ್ಲಿ ಚಾಲಕನ‌ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆಯಿತು. ನಂತರ ಮರಕ್ಕೆ ಡಿಕ್ಕಿಯಾಗಿ ಪ್ರಪಾತಕ್ಕೆ ಉರುಳಿದೆ. ಲಾರಿಯಲ್ಲಿದ್ದ ಗ್ರಾನೈಟ್‌ಗಳೆಲ್ಲ ಪ್ರಪಾತದಲ್ಲಿ ಚೆಲ್ಲಿವೆ. ಲಾರಿಯ ಬ್ರೇಕ್ ವೈಫಲ್ಯವಾಗಿದ್ದರಿಂದ ಅಪಘಾತವಾಗಿರುವ ಬಗ್ಗೆ ಶಂಕಿಸಲಾಗಿದೆ.

ಯಲ್ಲಾಪುರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.