ADVERTISEMENT

ಕಾರವಾರ | ಕೋವಿಡ್‌ನಿಂದ 99 ಮಂದಿ ಗುಣಮುಖ

69 ಮಂದಿಗೆ ಸೋಂಕು ದೃಢ: ಮೂಲ ತಿಳಿಯದ ಪ್ರಕರಣಗಳು 37

​ಪ್ರಜಾವಾಣಿ ವಾರ್ತೆ
Published 19 ಜುಲೈ 2020, 14:49 IST
Last Updated 19 ಜುಲೈ 2020, 14:49 IST

ಕಾರವಾರ: ಜಿಲ್ಲೆಯ ವಿವಿಧ ತಾಲ್ಲೂಕುಗಳ ಆಸ್ಪತ್ರೆಗಳಲ್ಲಿ ಕೋವಿಡ್‌ 19ಗೆ ಚಿಕಿತ್ಸೆ ಪಡೆಯುತ್ತಿದ್ದ 99 ಮಂದಿ ಗುಣಮುಖರಾಗಿದ್ದು, ಭಾನುವಾರ ಮನೆಗಳಿಗೆ ತೆರಳಿದ್ದಾರೆ. ಅವರಲ್ಲಿ ಭಟ್ಕಳತಾಲ್ಲೂಕು ಒಂದರಿಂದಲೇ75 ಮಂದಿ ಸೇರಿದ್ದಾರೆ.

ಶಿರಸಿಯ ಆಸ್ಪತ್ರೆಯಲ್ಲಿ ಚಿಕಿತ‌್ಸೆ ಪಡೆದ 17 ಮಂದಿ ಸೋಂಕುಮುಕ್ತರಾಗಿದ್ದಾರೆ. ಕುಮಟಾದಲ್ಲಿ ನಾಲ್ವರು, ಹಳಿಯಾಳದಲ್ಲಿ ಇಬ್ಬರು ಹಾಗೂ ಸಿದ್ದಾಪುರದಲ್ಲಿ ಒಬ್ಬರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿಈವರೆಗೆ 445 ಮಂದಿ ಕೋವಿಡ್‌ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. 630 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

69 ಮಂದಿಗೆ ಸೋಂಕು:ಜಿಲ್ಲೆಯ 69 ಮಂದಿಗೆ ಕೋವಿಡ್ 19 ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆಯ ಭಾನುವಾರದ ವರದಿಮಾಹಿತಿ ನೀಡಿದೆ. ಈ ಪೈಕಿ ಕುಮಟಾ ತಾಲ್ಲೂಕಿನಲ್ಲಿ 17 ಮಂದಿಗೆ ಖಚಿತವಾಗಿದೆ.

ADVERTISEMENT

ಯಲ್ಲಾಪುರ ತಾಲ್ಲೂಕಿನಲ್ಲಿ 12 ಜನರಿಗೆ,ಅಂಕೋಲಾ ತಾಲ್ಲೂಕಿನಲ್ಲಿ10, ಭಟ್ಕಳ, ಕಾರವಾರ ಹಾಗೂ ಮುಂಡಗೋಡ ತಾಲ್ಲೂಕುಗಳಲ್ಲಿ ತಲಾ ಆರು, ಹೊನ್ನಾವರ ತಾಲ್ಲೂಕಿನಲ್ಲಿ ನಾಲ್ವರು, ಸಿದ್ದಾಪುರತಾಲ್ಲೂಕಿನಲ್ಲಿ ಮೂವರು, ಶಿರಸಿಹಾಗೂ ಜೊಯಿಡಾ ತಾಲ್ಲೂಕಿನಲ್ಲಿ ತಲಾ ಇಬ್ಬರು ಮತ್ತುಹಳಿಯಾಳ ತಾಲ್ಲೂಕಿನಲ್ಲಿ ಒಬ್ಬರಿಗೆ ಕೋವಿಡ್ ದೃಢಪಟ್ಟಿದೆ.

37 ಜನರ ಸೋಂಕಿನ ಮೂಲ ಪತ್ತೆಯಾಗಿಲ್ಲ. ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಏಳು ಮಂದಿಗೆ ಬೇರೆ ರಾಜ್ಯಗಳಿಂದ, ನಗರಗಳಿಂದಪ್ರಯಾಣಿಸಿರುವ ಹಿನ್ನೆಲೆಯಿದೆ. ಆರು ಮಂದಿಗೆ ಜ್ವರದ (ಐ.ಎಲ್.ಐ) ಲಕ್ಷಣಗಳಿವೆ. ಒಬ್ಬರಿಗೆ ಉಸಿರಾಟದ ತೀವ್ರ ಸಮಸ್ಯೆ (ಎಸ್.ಎ.ಆರ್.ಐ) ಇರುವುದು ಆರೋಗ್ಯ ತಪಾಸಣೆಯ ವೇಳೆ ಗೊತ್ತಾಗಿದೆ.

ಆರೈಕೆ ಕೇಂದ್ರಕ್ಕೆ ದಾಖಲು:ಕೋವಿಡ್ 19 ಸೋಂಕಿತರಲ್ಲಿ ರೋಗ ಲಕ್ಷಣಗಳು ಇಲ್ಲದವರನ್ನು ಬಿ.ಸಿ.ಎಂ ವಸತಿ ನಿಲಯದಲ್ಲಿ ಆರಂಭಿಸಲಾಗಿರುವ ಕೋವಿಡ್ ಆರೈಕೆ ಕೇಂದ್ರಕ್ಕೆ ವರ್ಗಾಯಿಸಲಾಗಿದೆ. ಅವರೆಲ್ಲರಿಗೂ ಸರ್ಕಾರದ ಮಾರ್ಗಸೂಚಿಯ ಪ್ರಕಾರವೇ ಅಲೋಪಥಿ ಶೈಲಿಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ: ಅಂಕಿ ಅಂಶ

1,085 -ಒಟ್ಟು ಸೋಂಕಿತರು

630 -ಸಕ್ರಿಯ ಪ್ರಕರಣಗಳು

445 -ಗುಣಮುಖರಾದವರು

10 ‌-ಮೃತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.