ADVERTISEMENT

ಕಾರವಾರ: ಬಲೆಗೆ ಸಿಲುಕಿದ ಆಲಿವ್ ರಿಡ್ಲೆ ಆಮೆಗಳ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 5:01 IST
Last Updated 18 ಆಗಸ್ಟ್ 2022, 5:01 IST
   

ಕಾರವಾರ: ತಾಲ್ಲೂಕಿನ ದೇವಬಾಗ್ ಬಳಿಯ ದಂಡೇಬಾಗ್‌ನಲ್ಲಿ ಬುಧವಾರ (ಆ.17), ದಡಕ್ಕೆ ತೇಲಿಬಂದ ಆಳಸಮುದ್ರ ಮೀನುಗಾರಿಕೆಯ ಬಲೆಯಲ್ಲಿ ಎರಡು ಆಲಿವ್ ರಿಡ್ಲೆ ಆಮೆಗಳು ಸಿಲುಕಿದ್ದವು.

ಸ್ಥಳೀಯ ಮೀನುಗಾರರು ಅವುಗಳನ್ನು ಬಲೆಯಿಂದ ಬಿಡಿಸಿದರು. ಒಂದನ್ನು ಸಮುದ್ರಕ್ಕೆ ಮರಳಿ ಕಳುಹಿಸಲಾಯಿತು.
ಗಾಯಗೊಂಡ ಮತ್ತೊಂದು ಆಮೆಯನ್ನು ಅರಣ್ಯ ಇಲಾಖೆಯ ಸುಪರ್ದಿಗೆ ನೀಡಲಾಗಿದ್ದು, ಆರೈಕೆ ಮಾಡಲಾಗುತ್ತಿದೆ.

ವಲಯ ಅರಣ್ಯ ಸಂರಕ್ಷಣಾಧಿಕಾರಿ (ಮರೈನ್) ಪ್ರಮೋದ್ ಹಾಗೂ ಸಿಬ್ಬಂದಿ ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.