ADVERTISEMENT

ಬಶೆಟ್ಟಿ ಕೆರೆ ಅಭಿವೃದ್ಧಿಗೆ ಆದ್ಯತೆ: ಗಣಪತಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 11:57 IST
Last Updated 17 ಜನವರಿ 2022, 11:57 IST
ಶಿರಸಿಯ ಬಶೆಟ್ಟಿಕೆರೆ ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿದ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಜತೆ ಚರ್ಚಿಸಿದರು. ನಗರಸಭೆ ಅಧಿಕಾರಿಗಳು ಇದ್ದಾರೆ 
ಶಿರಸಿಯ ಬಶೆಟ್ಟಿಕೆರೆ ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿದ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಜತೆ ಚರ್ಚಿಸಿದರು. ನಗರಸಭೆ ಅಧಿಕಾರಿಗಳು ಇದ್ದಾರೆ    

ಶಿರಸಿ: ನಗರದ ಬಶೆಟ್ಟಿಕೆರೆಗೆ ಕಾಯಕಲ್ಪ ನೀಡಿ ಅದನ್ನು ಅಭಿವೃದ್ಧಿಪಡಿಸುವ ಕೆಲಸಕ್ಕೆ ಆದ್ಯತೆ ನೀಡಲಾಗುವುದು ಎಂದು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಭರವಸೆ ನೀಡಿದರು.

ಅಧಿಕಾರಿಗಳು, ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಅವರ ಜತೆ ಸೋಮವಾರ ಕೆರೆಯ ಸ್ಥಿತಿಗತಿ ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, ‘ಕಸ್ತೂರಬಾ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಈ ಕೆರೆ ಜಲಪಾತ್ರೆ ಎನಿಸಿದೆ. ಈಚಿನ ವರ್ಷದಲ್ಲಿ ಒತ್ತುವರಿ, ನಿರ್ವಹಣೆಯ ಕೊರತೆ ಕಾರಣಕ್ಕೆ ಕೆರೆ ಸೊರಗಿದೆ’ ಎಂದರು.

‘ಬಶೆಟ್ಟಿಕೆರೆ ಅಭಿವೃದ್ಧಿಪಡಿಸಲು ಜೀವಜಲ ಕಾರ್ಯಪಡೆ ಮುಂದೆ ಬಂದಿದೆ. ನಗರಸಭೆಯಿಂದಲೂ ಅಗತ್ಯ ಸಹಕಾರ ನೀಡಲಾಗುತ್ತದೆ. ಕೆರೆ ಹೂಳೆತ್ತಿಸುವ ಕೆಲಸ ಮಾಡಲಾಗುವುದು. ಬಳಿಕ ಅಲ್ಲಿ ಅಗತ್ಯ ಸೌಕರ್ಯಗಳನ್ನು ಒದಗಿಸುತ್ತೇವೆ’ ಎಂದರು.

ADVERTISEMENT

ಉಪಾಧ್ಯಕ್ಷೆ ವೀಣಾ ಶೆಟ್ಟಿ, ಎಇಇ ಜಗದೀಶ, ಪರಿಸರ ಎಂಜಿನಿಯರ್ ನಾರಾಯಣ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.