ಶಿರಸಿ: ಜಿಲ್ಲಾ ಮಧ್ಯವರ್ತಿ ಬ್ಯಾಂಕ್ಗೆ (ಕೆಡಿಸಿಸಿ) ಸಿದ್ದಾಪುರ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮತದಾರ ಕ್ಷೇತ್ರದಿಂದ ನಿರ್ದೇಶಕ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ರಾಘವೇಂದ್ರ ಪ್ರಭಾಕರ ಶಾಸ್ತ್ರಿ ಆಯ್ಕೆಯಾದರು.
ಇಲ್ಲಿನ ಬ್ಯಾಂಕ್ನ ಪ್ರಧಾನ ಕಚೇರಿಯಲ್ಲಿ ಸೋಮವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಬಿಳಗಿ ಸೇವಾ ಸಹಕಾರ ಸಂಘದಿಂದ ಕ್ಷೇತ್ರ ಪ್ರತಿನಿಧಿಸಿದ್ದ ರಾಘವೇಂದ್ರ ಹಾಗೂ ದೊಡ್ಮನೆ ಗ್ರುಪ್ ಗ್ರಾಮಗಳ ಸೇವಾ ಸಹಕಾರ ಸಂಘದ ವಿವೇಕ ಭಟ್ ನಡುವೆ ಸ್ಪರ್ಧೆ ನಡೆದಿತ್ತು. ಎಲ್ಲ 24 ಮತದಾರರೂ ಮತ ಚಲಾಯಿಸಿದ್ದು, ರಾಘವೇಂದ್ರ 16, ವಿವೇಕ 8 ಮತಗಳನ್ನು ಪಡೆದರು.
ಈ ಹಿಂದೆ ನಿರ್ದೇಶಕರಾಗಿದ್ದ ಷಣ್ಮುಖ ಗೌಡರ್ ನಿರ್ದೇಶಕರಾಗಿ ಕೇವಲ ಎರಡು ತಿಂಗಳಲ್ಲೇ ನಿಧನರಾಗಿ ತೆರವಾಗಿದ್ದ ಕ್ಷೇತ್ರಕ್ಕೆ ವರ್ಷದ ಬಳಿಕ ಚುನಾವಣೆ ನಡೆದಿತ್ತು. ಅಂದು ಷಣ್ಮುಖ ವಿರುದ್ಧ ವಿವೇಕ್ ಸಮಬಲ ಸಾಧಿಸಿದ್ದರು. ಚೀಟಿ ಮೂಲಕ ಆಯ್ಕೆ ನಡೆದಾಗ ಅದೃಷ್ಟ ಅವರಿಗೆ ಕೈಕೊಟ್ಟಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.