ಕಾರವಾರ: ನಗರವೂ ಸೇರಿದಂತೆ ಕರಾವಳಿಯ ವಿವಿಧೆಡೆ ಭಾನುವಾರ ಬೆಳಿಗ್ಗೆಯೇ ಬಂದ ಸಾಧಾರಣ ಮಳೆ ಮುದ ನೀಡಿತು. ಬೆಳಿಗ್ಗೆ 6.15ಕ್ಕೆ ಆರಂಭವಾದ ಮಳೆ ಸುಮಾರು ಮುಕ್ಕಾಲು ಗಂಟೆ ಬಂತು.
ದಟ್ಟವಾದ ಮೋಡ, ಗುಡುಗು ಹಾಗೂ ಸಿಡಿಲಿನ ಅಬ್ಬರದೊಂದಿಗೆ ಬಂದ ಮಳೆ, ಭಾನುವಾರದ ಸಂಭ್ರಮವನ್ನು ತುಸು ಹೆಚ್ಚಿಸಿತು. ಮೂರು ದಿನಗಳಿಂದ ಗಾಳಿಯಲ್ಲಿ ಅಧಿಕ ತೇವಾಂಶ ಕಂಡುಬಂದ ಕಾರಣ ವಿಪರೀತ ಸೆಕೆಯ ಅನುಭವ ಆಗುತ್ತಿತ್ತು. ಕಾರವಾರ, ಅಂಕೋಲಾ, ಕುಮಟಾ ಸುತ್ತಮುತ್ತ ಆಗಾಗ ಕಾರ್ಮೋಡ ಕವಿದಿದ್ದರೂ ಮಳೆಯಾಗಿರಲಿಲ್ಲ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಅಲೆಗಳ ಅಬ್ಬರ ಹೆಚ್ಚಿರಲಿದೆ. ಹಾಗಾಗಿ ಜೂನ್ 4ರವರೆಗೆ ಮೀನುಗಾರಿಕೆಗೆ ತೆರಳದಂತೆ ಮೀನುಗಾರಿಕಾ ಇಲಾಖೆಯು ಮೀನುಗಾರರಿಗೆ ಎಚ್ಚರಿಕೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.