ADVERTISEMENT

Leadership Row | ಸಿದ್ಧಾಂತ ಗಾಳಿಗೆ ತೂರಿದ ಸಿದ್ದರಾಮಯ್ಯ: ವಿ.ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 18:49 IST
Last Updated 6 ಡಿಸೆಂಬರ್ 2025, 18:49 IST
ವಿ.ಸೋಮಣ್ಣ
ವಿ.ಸೋಮಣ್ಣ   

ಕಾರವಾರ: ‘90ರ ದಶಕದ ಸಿದ್ದರಾಮಯ್ಯ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಈಗ ಸಂಪೂರ್ಣ ಬದಲಾಗಿದ್ದಾರೆ. ಸಿದ್ಧಾಂತಗಳನ್ನೆಲ್ಲ ಗಾಳಿಗೆ ತೂರಿದ್ದಾರೆ’ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಆರೋಪಿಸಿದರು.

‘ನಾನು, ಸಿದ್ದರಾಮಯ್ಯ ಒಂದು ಕಾಲದಲ್ಲಿ ಒಟ್ಟಿಗೆ ಇದ್ದವರು. ಆಗಿನ ಸಮಯಕ್ಕಿಂತ ಈಗ ಅವರು ಭಿನ್ನವಾಗಿದ್ದಾರೆ. ಸಂಪೂರ್ಣ ಬಹುಮತ ಸಿಕ್ಕರೂ ಜನಪರ ಆಡಳಿತ ನೀಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಜನರು ಭ್ರಮನಿರಸನಗೊಂಡಿದ್ದಾರೆ’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

‘ರಾಜ್ಯದಲ್ಲಿ ಎಲ್ಲೇ ಹೋದರೂ ಜನಸಾಮಾನ್ಯರು ಸಿದ್ದರಾಮಯ್ಯ ಯಾವಾಗ ಅಧಿಕಾರದಿಂದ ಕೆಳಗಿಳಿಯುತ್ತಾರೆ ಎಂದು ಪ್ರಶ್ನಿಸುತ್ತಾರೆ. ಈಗಿನ ರಾಜ್ಯ ಸರ್ಕಾರದಿಂದ ದುರಾಡಳಿತವೇ ಹೆಚ್ಚಿದೆ. ಹೇಳುವವರು, ಕೇಳುವವರು ಇಲ್ಲದ ಸ್ಥಿತಿಯಿದೆ’ ಎಂದರು.

ADVERTISEMENT
ತಾತ್ಕಾಲಿಕ ಕದನ ವಿರಾಮ:
‘ಚಳಿಗಾಲ ಅಧಿವೇಶನ ಬಂದ ಕಾರಣ ಮುಖ್ಯಮಂತ್ರಿ ಕುರ್ಚಿ ಕದನ ತಾತ್ಕಾಲಿಕ ವಿರಾಮ ಸ್ಥಿತಿ ತಲುಪಿದೆ. ಅಧಿವೇಶನದ ಬಳಿಕ ಇದು ಜೋರಾಗಲಿದೆ’ ಎಂದು ಸಂಸದ ಜಗದೀಶ ಶೆಟ್ಟರ್ ಶಿರಸಿಯಲ್ಲಿ ಹೇಳಿದರು. ‘ಅನುದಾನ ಬೇಕಾದರೆ ಒಳ್ಳೆಯ ನಾಟಿ ಕೋಳಿ ಅಡುಗೆ ಮಾಡುವುದಾಗಿ ಹೇಳಿ, ಸಿಎಂ ಸಿದ್ದರಾಮಯ್ಯ ವಿಧಾನಸಭಾ ಅಧಿವೇಶನ ಬಿಟ್ಟು ಬೇಕಾದರೂ ಬರುತ್ತಾರೆ’ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.