
ಪ್ರಜಾವಾಣಿ ವಾರ್ತೆ
ಶಿರಸಿ: ತಾಲ್ಲೂಕಿನ ಹುಣಸೇಕೊಪ್ಪದ ಐದೂವರೆ ವರ್ಷದ ಅಧಿತ್ರಿ ನಾಗರಾಜ ಹೆಗಡೆ ಎರಡನೆಯ ಬಾರಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಆಯ್ಕೆಯಾಗಿದ್ದಾಳೆ.
ಕರ್ನಾಟಕದ ಇತಿಹಾಸ, ರಾಜಮನೆತನಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ದೇವಸ್ಥಾನಗಳು, ಪ್ರಸಿದ್ಧ ಕಂಪನಿಗಳು, ಕರ್ನಾಟಕದ ಚಿಹ್ನೆಗಳು, ವಿಧಾನಸಭಾ ಕ್ಷೇತ್ರಗಳು ಹೀಗೆ ಕರ್ನಾಟಕದ ಕುರಿತು 700ಕ್ಕೂ ಹೆಚ್ಚು ರಸಪ್ರಶ್ನೆಗಳನ್ನು ಕನ್ನಡದಲ್ಲಿ ಉತ್ತರಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಆಯ್ಕೆಯಾಗಿದ್ದಾಳೆ.
ಎರಡು ವರ್ಷದ ಹತ್ತು ತಿಂಗಳಾಗಿದ್ದಾಗ ಮೊದಲ ಬಾರಿ ಇಂಡಿಯಾ ಬುಕ್ ಆಫ್ ರೆಕಾರ್ಡಗೆ ಆಯ್ಕೆ ಆಗಿದ್ದ ಈಕೆ ನಾಗರಾಜ ಹೆಗಡೆ ಮತ್ತು ಸುಚೇತಾ ಹೆಗಡೆ ಪುತ್ರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.