ಶಿರಸಿ: ತಾಲ್ಲೂಕಿನ ಬನದಗೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರಂಗಾಪುರದ ಕುಂಬಾರಕಟ್ಟೆ ಕೆರೆ ನಿರಂತರ ಮಳೆಯಿಂದ ಭರ್ತಿಯಾಗಿದೆ. ಕೆರೆ ಕಟ್ಟೆ ಕೆಲವೆಡೆ ಒಡೆದಿದ್ದು ನೀರು ಕೆಳಭಾಗದ ಕೃಷಿಭೂಮಿಗೆ ನುಗ್ಗಿದೆ.
ಅಡಿಕೆ ತೋಟ, ಭತ್ತದ ಗದ್ದೆಗಳಿಗೆ ವ್ಯಾಪಕವಾಗಿ ನೀರು ಹರಿಯುತ್ತಿದ್ದು ರೈತರ ಆತಂಕಕ್ಕೆ ಕಾರಣವಾಗಿದೆ.
'ಸಣ್ಣ ನೀರಾವರಿ ಇಲಾಖೆಯವರು ಕೆಲ ತಿಂಗಳ ಹಿಂದಷ್ಟೆ ಕೆರೆ ಕಟ್ಟೆ ಕಾಮಗಾರಿ ನಡೆಸಿದ್ದರು. ಕೋಡಿ ಬೀಳಲು ಕಾಲುವೆ ನಿರ್ಮಿಸಿರಲಿಲ್ಲ. ಮಳೆ ಹೆಚ್ಚಿರುವ ಕಾರಣ ಕೆರೆ ಭರ್ತಿಯಾಗಿ ಕಟ್ಟೆ ಅಲ್ಲಲ್ಲಿ ಒಡೆದಿದೆ. ಕಳಪೆ ಕಾಮಗಾರಿ ನಡೆದಿರುವುದು ಸ್ಪಷ್ಟವಾಗುತ್ತಿದೆ' ಎಂದು ಗ್ರಾಮ ಪಂಚಾಯ್ತಿ ಸದಸ್ಯ ಬಸವರಾಜ ನಂದಿಕೇಶ್ವರಮಠ ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.