ಕಾರವಾರ: ಅನುಮತಿಯಿಲ್ಲದೇ ದ್ವಿಚಕ್ರ ವಾಹನದಲ್ಲಿ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಗ್ರಾಮೀಣ ಠಾಣೆ ಪೊಲೀಸರು ಭಾನುವಾರ ರಾತ್ರಿ ನಗರದ ಹೊರವಲಯದಶಿರವಾಡ ಗಣೇಶ ನಗರದಲ್ಲಿ ಬಂಧಿಸಿದ್ದಾರೆ. ಅವರಿಂದ187 ಜಿಲೆಟಿನ್ ಕಡ್ಡಿಗಳು ಮತ್ತು 100 ಡಿಟೋನೇಟರ್ಗಳನ್ನು ಜಪ್ತಿ ಮಾಡಲಾಗಿದೆ.
ಕದ್ರಾದ ರಾಜೀವ ನಗರ ನಿವಾಸಿ ರಮೇಶ ಪುನ್ಹಾ (36) ಹಾಗೂ ಕದ್ರಾ ಸಮೀಪದ ಗೋರೆಯ ನರೇಶ ಕೋಲಕರ (21)ಬಂಧಿತ ಆರೋಪಿಗಳು. ಇಬ್ಬರೂ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು.
ಸ್ಫೋಟಕಗಳು ಮತ್ತು ತಂತಿಗಳನ್ನು ತುಂಬಿದ್ದ ಚೀಲವನ್ನುಹೋಂಡಾ ಆ್ಯಕ್ಟಿವಾ ವಾಹನದಲ್ಲಿಟ್ಟುಕೊಂಡುಇಬ್ಬರೂ ಶಿರವಾಡ ರೈಲು ನಿಲ್ದಾಣದತ್ತ ಬರುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪಿ.ಎಸ್.ಐರೇವಣ ಸಿದ್ದಪ್ಪ ಜಿರಂಕಲಗಿ ನೇತೃತ್ವದ ತಂಡವುದಾಳಿ ಮಾಡಿ ಆರೋಪಿಗಳನ್ನು ಬಂಧಿಸಿತು. ಸ್ಫೋಟಕಗಳನ್ನು ಎಲ್ಲಿಗೆ ಮತ್ತು ಯಾಕೆ ಸಾಗಿಸುತ್ತಿದ್ದರು ಎಂಬ ಮಾಹಿತಿ ತಿಳಿದುಬಂದಿಲ್ಲ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.