ADVERTISEMENT

ವಾಮನಾಶ್ರಮ ಮಠದ ಟೆಂಪೊ ಪಲ್ಟಿ: ಚಾಲಕ ಸಾವು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 6:56 IST
Last Updated 13 ಸೆಪ್ಟೆಂಬರ್ 2022, 6:56 IST
ಹಳದಿಪುರದ ವಾಮನಾಶ್ರಮಕ್ಕೆ ಸೇರಿದ ಟೆಂಪೊ ಟ್ರಾವೆಲರ್ ವಾಹನವು ಮಹಾರಾಷ್ಟ್ರದ ಕನಕವಲ್ಲಿ– ಕುಡಲ್ ನಡುವೆ ಸೋಮವಾರ ಮಧ್ಯಾಹ್ನ ಪಲ್ಟಿಯಾಗಿರುವುದು
ಹಳದಿಪುರದ ವಾಮನಾಶ್ರಮಕ್ಕೆ ಸೇರಿದ ಟೆಂಪೊ ಟ್ರಾವೆಲರ್ ವಾಹನವು ಮಹಾರಾಷ್ಟ್ರದ ಕನಕವಲ್ಲಿ– ಕುಡಲ್ ನಡುವೆ ಸೋಮವಾರ ಮಧ್ಯಾಹ್ನ ಪಲ್ಟಿಯಾಗಿರುವುದು   

ಕಾರವಾರ/ ಹೊನ್ನಾವರ: ಹೊನ್ನಾವರ ತಾಲ್ಲೂಕಿನ ಹಳದೀಪುರ ವಾಮನಾಶ್ರಮದ ಮಠಕ್ಕೆ ಸೇರಿದ ಟೆಂಪೊ ಟ್ರಾವೆಲರ್ ವಾಹನವು ಮಹಾರಾಷ್ಟ್ರದ ಕನಕವಲ್ಲಿ– ಕುಡಲ್ ನಡುವೆ ಸೋಮವಾರ ಮಧ್ಯಾಹ್ನ ಪಲ್ಟಿಯಾಗಿದೆ. ಗಂಭೀರವಾಗಿ ಗಾಯಗೊಂಡ ಚಾಲಕ, ಕುಂದಾಪುರದ ನಿತ್ಯಾನಂದ ಶೇಟ್ (45) ಮೃತಪಟ್ಟಿದ್ದಾರೆ. ಮತ್ತಿಬ್ಬರು ಗಾಯಗೊಂಡಿದ್ದಾರೆ.

ಕನಕವಲ್ಲಿಯಲ್ಲಿ ಚಾತುರ್ಮಾಸ್ಯ ಮುಕ್ತಾಯಗೊಳಿಸಿ ಹಳದಿಪುರಕ್ಕೆ ಬರುತ್ತಿದ್ದಾಗ ಈ ಅಪಘಾತವಾಗಿದೆ.ಓರೋಸ್‌ನ ಸಾವಂತವಾಡ ಭವಾನಿ ಮಂದಿರದ ಬಳಿ ಗೋವಾ– ಮಹಾರಾಷ್ಟ್ರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ (ಕೆ.ಎ 47 ಎಂ 3625) ಪಲ್ಟಿಯಾಯಿತು. ಅದರಲ್ಲಿದ್ದ ಮಠಕ್ಕೆ ಸಂಬಂಧಿಸಿದ ಕರಪತ್ರಗಳು, ಸಾಮಗ್ರಿ ರಸ್ತೆಯ ತುಂಬ ಚೆಲ್ಲಾಪಿಲ್ಲಿಯಾಗಿದ್ದವು. ಸ್ಥಳಕ್ಕೆ ಬಂದ ಪೊಲೀಸರು ಮತ್ತು ಸ್ಥಳೀಯರು ರಕ್ಷಣಾ ಕಾರ್ಯಕ್ಕೆ ನೆರವಾದರು.

ಸ್ವಲ್ಪ ತಡವಾಗಿ ಹೊರಟಿದ್ದ ವಾಮನಾಶ್ರಮ ಸ್ವಾಮೀಜಿ ಕಾರಿನಲ್ಲಿ ಬರುತ್ತಿದ್ದರು. ಅವರು ಕೂಡ ಸ್ಥಳಕ್ಕೆ ಬಂದು ಗಾಯಾಳುಗಳ ಆರೋಗ್ಯ ವಿಚಾರಿಸಿದರು ಎಂದು ಮಠದ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.