ADVERTISEMENT

ನೆರೆ ಬಂದರೂ ಕುಡಿಯಲು ನೀರಿಲ್ಲ!

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 14:18 IST
Last Updated 11 ಆಗಸ್ಟ್ 2019, 14:18 IST
ಕಾರವಾರ ತಾಲ್ಲೂಕಿನ ವಿರ್ಜೆ ಗ್ರಾಮದ ಮಲ್ಟಿ ರಸ್ತೆಯ ನಾರಾಯಣ ಚೌಗುಲೆ ಮತ್ತು ಸಂಗಡಿಗರು ಕುಡಿಯುವ ನೀರು ತರಲು ಕೊಡಗಳನ್ನು ತಳ್ಳು ಗಾಡಿಯಲ್ಲಿ ಇಟ್ಟುಕೊಂಡು ಹೋಗುತ್ತಿರುವುದು.
ಕಾರವಾರ ತಾಲ್ಲೂಕಿನ ವಿರ್ಜೆ ಗ್ರಾಮದ ಮಲ್ಟಿ ರಸ್ತೆಯ ನಾರಾಯಣ ಚೌಗುಲೆ ಮತ್ತು ಸಂಗಡಿಗರು ಕುಡಿಯುವ ನೀರು ತರಲು ಕೊಡಗಳನ್ನು ತಳ್ಳು ಗಾಡಿಯಲ್ಲಿ ಇಟ್ಟುಕೊಂಡು ಹೋಗುತ್ತಿರುವುದು.   

ಕಾರವಾರ: ಕಾಳಿ ನದಿಯ ಪ್ರವಾಹ ಐದಾರು ದಿನ ವಿರ್ಜೆ ಗ್ರಾಮವನ್ನುಆವರಿಸಿದ್ದರೂ ಈಗ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಇಲ್ಲಿನ ಲಕ್ಷ್ಮೀನಗರ ಹಲವು ಕುಟುಂಬದವರುತಳ್ಳುಗಾಡಿಗಳಲ್ಲಿ ಕೊಡಗಳನ್ನು ಇಟ್ಟುಕೊಂಡು ಸಮೀಪದ ಬಾವಿಗೆ ಹೋಗಿ ನೀರು ತರುತ್ತಾರೆ.

‘ಗ್ರಾಮದಲ್ಲಿ ನೆರೆ ಬಂದ ಕಾರಣ ಪಂಪ್‌ ಹೌಸ್ ಮುಳುಗಿತು. ಹಾಗಾಗಿ ಅದರ ದುರಸ್ತಿಯಾಗದೇ ಕುಡಿಯುವ ನೀರು ತರಲು ಬೇರೆ ಮಾರ್ಗಗಳಿಲ್ಲ. ನಮ್ಮ ಗ್ರಾಮಕ್ಕೆ ಎನ್‌ಪಿಸಿಎಲ್‌ನವರು ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಿದ್ದಾರೆ. ಮೊದಲು ಅದರಿಂದಲೇ ನೀರು ಪಡೆಯುತ್ತಿದ್ದೆವು’ ಎನ್ನುತಾರೆ ಗ್ರಾಮದ ಮಲ್ಟಿ ರಸ್ತೆಯ ನಾರಾಯಣ ಚೌಗುಲೆ ಮತ್ತು ಸುತ್ತಮುತ್ತಲಿನವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT