ADVERTISEMENT

ಹಗರಿಬೊಮ್ಮನಹಳ್ಳಿ: ಕೊನೆಗೂ ಮಾಲವಿ ಜಲಾಶಯದಲ್ಲಿ ಯುವಕರಿಬ್ಬರ ಮೃತ ದೇಹ ಪತ್ತೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2022, 9:08 IST
Last Updated 12 ಸೆಪ್ಟೆಂಬರ್ 2022, 9:08 IST
ಚರಣರಾಜ್‌, ಎಂ.ಆರ್‌. ಹಾಲೇಶ್‌
ಚರಣರಾಜ್‌, ಎಂ.ಆರ್‌. ಹಾಲೇಶ್‌   

ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಮಾಲವಿ ಜಲಾಶಯದಲ್ಲಿ ಈಜಾಡಲು ಹೋಗಿ ಭಾನುವಾರ ಕಣ್ಮರೆಯಾಗಿದ್ದ ಇಬ್ಬರು ಯುವಕರ ಮೃತದೇಹಗಳು ಸೋಮವಾರ ಪತ್ತೆಯಾಗಿವೆ.

ಕೊಟ್ಟೂರಿನ ಚರಣರಾಜ್ (33) ಹಾಗೂ ಎಂ. ಆರ್. ಹಾಲೇಶ್ (34) ಮೃತರು. ಚರಣರಾಜ್‌ ಹಾಗೂ ಹಾಲೇಶ್‌ ಅವರು ತಮ್ಮ ಐದು ಜನ ಸ್ನೇಹಿತರೊಂದಿಗೆ ಭಾನುವಾರ ಜಲಾಶಯ ವೀಕ್ಷಣೆಗೆ ಹೋಗಿ ಈಜಾಟಕ್ಕೆ ಇಳಿದಿದ್ದಾರೆ. ಅನಂತರ ಇಬ್ಬರು ನಾಪತ್ತೆಯಾಗಿದ್ದಾರೆ. ಸ್ನೇಹಿತರು ಬಂದು ವಿಷಯ ತಿಳಿಸಿದ್ದಾರೆ. ಅಗ್ನಿಶಾಮಕ ದಳದವರು ಸಂಜೆ ಹುಡುಕಾಟ ನಡೆಸಿದ್ದಾರೆ. ಕತ್ತಲಾಗುತ್ತಿದ್ದಂತೆ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ಅವರು ಸೋಮವಾರ ಬೆಳಿಗ್ಗೆ ದಾವಣಗೆರೆಯಿಂದ ಯಾಂತ್ರೀಕೃತ ದೋಣಿ ತರಿಸಿ, ತೀವ್ರ ಹುಡುಕಾಟ ನಡೆಸಿದ್ದಾರೆ. ಅಂತಿಮವಾಗಿ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದು, ಸ್ಥಳದಲ್ಲಿದ್ದ ಅವರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಎಂ.ಎಸ್ಸಿ, ಬಿ.ಇಡಿ ಪದವೀಧರರಾಗಿರುವ ಚರಣರಾಜ್‌ ಸರ್ಕಾರಿ ಶಾಲಾ ಶಿಕ್ಷಕರಾಗಿ ಇತ್ತೀಚೆಗೆ ನೇಮಕಗೊಂಡಿದ್ದರು. ಇನ್ನಷ್ಟೇ ಕೆಲಸಕ್ಕೆ ನಿಯೋಜನೆಗೊಳ್ಳಬೇಕಿತ್ತು. ಹಾಲೇಶ್‌ ಅವರು ಕೂಡ್ಲಿಗಿ ಅಂಚೆ ಕಚೇರಿಯಲ್ಲಿ ಉದ್ಯೋಗಿಯಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.