ADVERTISEMENT

ವಿಜಯನಗರ ಜಿಲ್ಲಾ ಬಿಜೆಪಿ ಕಚೇರಿಗೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2022, 4:01 IST
Last Updated 15 ಡಿಸೆಂಬರ್ 2022, 4:01 IST
ವಿಜಯನಗರ ಜಿಲ್ಲೆಯ ನೂತನ ಬಿಜೆಪಿ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿತು
ವಿಜಯನಗರ ಜಿಲ್ಲೆಯ ನೂತನ ಬಿಜೆಪಿ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿತು   

ಹೊಸಪೇಟೆ (ವಿಜಯನಗರ):ವಿಜಯನಗರ ಜಿಲ್ಲಾ ಬಿಜೆಪಿಯ ನೂತನಕಚೇರಿ ನಿರ್ಮಾಣಕ್ಕೆ ಗುರುವಾರ ಭೂಮಿಪೂಜೆ ನೆರವೇರಿತು.

ನಗರದ ಭಟ್ರಹಳ್ಳಿ ಆಂಜನೇಯ ದೇವಸ್ಥಾನದ ಬಳಿ ಕಚೇರಿಗೆ ಮೀಸಲಾದ ಜಾಗದಲ್ಲಿ ಪೂಜಾ ವಿಧಿವಿಧಾನಗಳು ನಡೆದವು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ವರ್ಚುವಲ್‌ ಆಗಿಕಟ್ಟಡ ನಿರ್ಮಾಣಕ್ಕೆ‌ ಚಾಲನೆ ನೀಡುವರು. ಅದರ ಭಾಗವಾಗಿ ಪೂಜಾ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ.

ADVERTISEMENT

ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ, ಮಂಡಲ‌ ಅಧ್ಯಕ್ಷ ಕಾಸೆಟ್ಟಿ ಉಮಾಪತಿ, ನಗರಸಭೆ ಸದಸ್ಯ ಜೀವರತ್ನಂ, ಮುಖಂಡರಾದ ಅಶೋಕ ಜೀರೆ, ಕವಿತಾ ಈಶ್ವರ್ ಸಿಂಗ್, ದೀನಾ ಮಂಜುನಾಥ್ ಇದ್ದರು.

ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಅವರ ಬಂಗ್ಲೆ ಸಮೀಪದ ಜಾಗವನ್ನು ಬಿಜೆಪಿ ಕಚೇರಿಗೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.