ವಿಜಯನಗರ (ಹೊಸಪೇಟೆ): ತಡೆ ಹಿಡಿದಿರುವ 18 ತಿಂಗಳ ತುಟ್ಟಿಭತ್ಯೆ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದವರು ಶುಕ್ರವಾರ ಇಲ್ಲಿನ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ, ನಿಶ್ಚಿತ ಪಿಂಚಣಿ ಎಲ್ಲರಿಗೂ ಅನ್ವಯವಾಗುವಂತೆ ಮರುಜಾರಿಗೊಳಿಸಬೇಕು. ಐದು ವರ್ಷಕ್ಕೊಮ್ಮೆ ವೇತನ ಆಯೋಗ ರಚಿಸಬೇಕು. ಹೊರಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಒಕ್ಕೂಟದ ಜಿಲ್ಲಾ ಅಧ್ಯಕ್ಷ ನಾಗರಾಜ ಪತ್ತಾರ, ಜಿಲ್ಲಾ ಗೌರವ ಅಧ್ಯಕ್ಷ ತಾಯಪ್ಪ ನಾಯಕ, ಉಪಾಧ್ಯಕ್ಷ ದಯಾನಂದ ಕಿನ್ನಾಳ್, ತಾಲ್ಲೂಕು ಅಧ್ಯಕ್ಷ ಕಂಪ್ಲಿ ಚಂದ್ರಪ್ಪ, ಉಪಾಧ್ಯಕ್ಷ ಧರ್ಮನಗೌಡ, ವಿಷ್ಣು ನಾಯಕ, ಟಿ.ಎಂ. ಉಷಾರಾಣಿ, ಸುನೀತಾ ಅನ್ವೇಕರ್, ಟಿ. ಲೀಲಾ, ಗಾಯತ್ರಿ, ಎಂ.ಪಿ. ದೊಡ್ಡಮನಿ, ಜಂಬಯ್ಯ ನಾಯಕ, ಪಾರ್ವತಿ, ಟಿ. ಜಯಮ್ಮ, ಹನುಮಂತಪ್ಪ, ಶ್ರೀಹರಿ, ವೀಣಾ, ಜಿ.ಎಂ. ಅಶ್ವಿನಿ, ಸುಜಾತಾ, ಜೆ. ತಿಪ್ಪೇಸ್ವಾಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.