ಹರಪನಹಳ್ಳಿ: ತಾಲ್ಲೂಕಿನ ಮುತ್ತಿಗಿ ಗ್ರಾಮದಲ್ಲಿ ಕ್ರಿಮಿನಾಶಕ ಸಿಂಪಡಿಸಿದ ಬೆಳೆಯನ್ನು ತಿಂದು 34 ಕುರಿಗಳು ಮತ್ತು ಒಂದು ಮೇಕೆ ಸಾವನ್ನಪ್ಪಿದೆ.
ಮುತ್ತಿಗೆ ಗ್ರಾಮದ ಕುರಿಗಾಹಿಗಳಾದ ಕೊಟ್ರಪ್ಪ, ಚೌಡಪ್ಪ, ಹಾಲಪ್ಪ ಎಂಬುವರಿಗೆ ಕುರಿಗಳು ಮತ್ತು ಮೇಕೆಗಳು ಸೇರಿದ್ದವು. ಪಶುವೈದ್ಯರು ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದರು. ಈ ಕುರಿತು ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ ಎಂದು ಚಿಗಟೇರಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.