ಹೊಸಪೇಟೆ: ಹಂಪಿ ವಿರೂಪಾಕ್ಷ ದೇವಸ್ಥಾನದ ಹುಂಡಿ ಎಣಿಸಲಾಗಿದ್ದು, ₹15.22 ಲಕ್ಷ ಸಂಗ್ರಹವಾಗಿದೆ.
ದೇವಸ್ಥಾನದ ಗರ್ಭಗೃಹದ ಮುಂಭಾಗದ ಹುಂಡಿಯನ್ನು ಮಾರ್ಚ್ 3ರಂದು ಖಾಲಿಮಾಡಿ ಇಡಲಾಗಿತ್ತು, ದಕ್ಷಿಣ ಭಾಗದ ಹುಂಡಿಯನ್ನು ನವೆಂಬರ್ 12ರಂದು ಖಾಲಿ ಮಾಡಿ ಇಡಲಾಗಿತ್ತು. ಈ ಎರಡೂ ಹುಂಡಿಗಳಲ್ಲಿ ತುಂಬಿದ್ದ ಹಣ ಎಣಿಸಿದಾಗ ಒಟ್ಟು15,22,660 ಸಂಗ್ರಹವಾಗಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ಹನುಮಂತಪ್ಪ ಅವರು ತಿಳಿಸಿದ್ದಾರೆ.
7ರಿಂದ ಲೋಕಾಯುಕ್ತ ಜನಸಂಪರ್ಕ ಸಭೆ
ಹೊಸಪೇಟೆ: ಕರ್ನಾಟಕ ಲೋಕಾಯುಕ್ತ ಹೊಸಪೇಟೆ ಘಟಕದಿಂದ ಡಿವೈಎಸ್ಪಿ ಹಾಗೂ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಮೇ.7ರಿಂದ ಜಿಲ್ಲೆಯ ವಿವಿಧೆಡೆ ಜನಸಂಪರ್ಕ ಸಭೆ ನಡೆಯಲಿವೆ
7ರಂದು ಬೆಳಿಗ್ಗೆ 11ರಿಂದ 1ರವರೆಗೆ ಗೆ ಕೊಟ್ಟೂರು ತಾಲ್ಲೂಕು ಕಚೇರಿಯಲ್ಲಿ, 12ರಂದು ಕೂಡ್ಲಿಗಿ, 20ರಂದು ಹರಪನಹಳ್ಳಿಯಲ್ಲಿ ಸಭೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.