ADVERTISEMENT

ಹೊಸಪೇಟೆ: ರೆಸ್ಟೊರೆಂಟ್‌ಗೆ ಬೆಂಕಿ, ಅಪಾರ ಹಾನಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2023, 13:44 IST
Last Updated 17 ಫೆಬ್ರುವರಿ 2023, 13:44 IST
ಹೊಸಪೇಟೆ ತಾಲ್ಲೂಕಿನ ಧರ್ಮಸಾಗರ ಸಮೀಪದ ರೆಸ್ಟೊರೆಂಟ್‌ನಲ್ಲಿ ಶುಕ್ರವಾರ ಬೆಂಕಿ ಹೊತ್ತಿಕೊಂಡು ಹೊಗೆ ಆವರಿಸಿಕೊಂಡಿತು
ಹೊಸಪೇಟೆ ತಾಲ್ಲೂಕಿನ ಧರ್ಮಸಾಗರ ಸಮೀಪದ ರೆಸ್ಟೊರೆಂಟ್‌ನಲ್ಲಿ ಶುಕ್ರವಾರ ಬೆಂಕಿ ಹೊತ್ತಿಕೊಂಡು ಹೊಗೆ ಆವರಿಸಿಕೊಂಡಿತು   

ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಧರ್ಮಸಾಗರ ಸಮೀಪದ ರಾಷ್ಟ್ರೀಯ ಹೆದ್ದಾರಿ 63ಕ್ಕೆ ಹೊಂದಿಕೊಂಡಂತೆ ಇರುವ ರಾಜಕುಮಾರ್‌ ರೆಸ್ಟೊರೆಂಟ್‌ನಲ್ಲಿ ಶುಕ್ರವಾರ ಬೆಂಕಿ ಹೊತ್ತಿಕೊಂಡು ಅಪಾರ ಪ್ರಮಾಣದ ಹಾನಿಯಾಗಿದೆ.

ಬೆಂಕಿಯಿಂದ ಅಡುಗೆ ಸಾಮಗ್ರಿಗಳು ಹಾಗೂ ಇತರೆ ವಸ್ತುಗಳು ಸುಟ್ಟು ಕರಕಲಾಗಿವೆ. ವಿಷಯ ತಿಳಿದು ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸುವವರೆಗೆ ರೆಸ್ಟೊರೆಂಟ್‌ನ ಕೆಲವು ಭಾಗ ಸುಟ್ಟು ಹೋಗಿತ್ತು. ಅಗ್ನಿ ನಂದಕ ದಳದವರು ಬೆಂಕಿ ಇತರೆಡೆ ವ್ಯಾಪಿಸದಂತೆ ನೋಡಿಕೊಂಡರು.

‘ಬೆಂಕಿ ಹೇಗೆ ಹೊತ್ತಿಕೊಂಡಿತ್ತು ಗೊತ್ತಿಲ್ಲ. ಆದರೆ, ಅಪಾರ ಹಾನಿಯಾಗಿದೆ. ₹15 ಲಕ್ಷ ಸಾಲ ಮಾಡಿ ರೆಸ್ಟೊರೆಂಟ್‌ ನಡೆಸುತ್ತಿದ್ದೆ. ಕೋವಿಡ್‌ ಬಳಿಕ ಈಗಷ್ಟೇ ವ್ಯವಹಾರ ಚೇತರಿಸಿಕೊಳ್ಳುತ್ತಿತ್ತು. ಈಗ ಬೆಂಕಿ ಹೊತ್ತಿಕೊಂಡು ಹಾನಿಯಾಗಿದ್ದರಿಂದ ತೊಂದರೆ ಆಗಿದೆ’ ಎಂದು ರೆಸ್ಟೊರೆಂಟ್‌ ಮಾಲೀಕ ರಾಜಕುಮಾರ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.