ADVERTISEMENT

ನೂರು ಅರ್ಚಕರಿಗೆ ಆಹಾರ ಕಿಟ್ ವಿತರಣೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 10:21 IST
Last Updated 1 ಜೂನ್ 2021, 10:21 IST
ಡಿವೈಎಸ್ಪಿ ವಿ. ರಘುಕುಮಾರ, ಉದ್ಯಮಿ ಕಿಶೋರ್‌ ಪತ್ತಿಕೊಂಡ ಅವರು ಮಂಗಳವಾರ ಹೊಸಪೇಟೆಯಲ್ಲಿ ಅರ್ಚಕರಿಗೆ ದಿನಸಿ ಕಿಟ್‌ ವಿತರಿಸಿದರು
ಡಿವೈಎಸ್ಪಿ ವಿ. ರಘುಕುಮಾರ, ಉದ್ಯಮಿ ಕಿಶೋರ್‌ ಪತ್ತಿಕೊಂಡ ಅವರು ಮಂಗಳವಾರ ಹೊಸಪೇಟೆಯಲ್ಲಿ ಅರ್ಚಕರಿಗೆ ದಿನಸಿ ಕಿಟ್‌ ವಿತರಿಸಿದರು   

ಹೊಸಪೇಟೆ(ವಿಜಯನಗರ): ಲಾಕ್‌ಡೌನ್‌ನಿಂದ ಸಮಸ್ಯೆ ಅನುಭವಿಸುತ್ತಿರುವ ನೂರು ಜನ ಅರ್ಚಕರಿಗೆ ಉದ್ಯಮಿ ಕಿಶೋರ್‌ ಪತ್ತಿಕೊಂಡ ಅವರು ಮಂಗಳವಾರ ಆಹಾರದ ಕಿಟ್‌ ವಿತರಿಸಿದರು.

10 ಕೆ.ಜಿ ಅಕ್ಕಿ, 1 ಕೆ.ಜಿ. ತೊಗರಿ ಬೆಳೆ, 1 ಕೆ.ಜಿ. ರವೆ, 1 ಲೀಟರ್‌ ಅಡುಗೆ ಎಣ್ಣೆ ಸೇರಿದಂತೆ ಇತರೆ ಸಾಮಗ್ರಿಗಳನ್ನು ಒಳಗೊಂಡ ಒಟ್ಟು ₹1,250 ಮೌಲ್ಯದ ನೂರು ಆಹಾರ ಕಿಟ್‌ಗಳನ್ನು ವಿತರಿಸಿದರು. ಡಿವೈಎಸ್ಪಿ ವಿ. ರಘುಕುಮಾರ ಅವರು ಕಿಟ್‌ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿದರು.

‘ಅರ್ಚಕ ಕುಟುಂಬಗಳಿಗೆ ರೇಷನ್ ಕಾರ್ಡ್ ಇರೋದಿಲ್ಲ. ರೇಷನ್ ಕಾರ್ಡ್ ಇರೋರಿಗೆ ರೇಷನ್ ಸಿಗುತ್ತದೆ. ಆದರೆ, ಈ ಕುಟುಂಬಗಳಿಗೆ ಯಾರೂ ಸಹಾಯ ಮಾಡೊಲ್ಲ. ಅವರಿಗೆ ನೆರವಾಗಲು ಆಹಾರದ ಕಿಟ್‌ ವಿತರಿಸಲಾಗುತ್ತಿದೆ’ ಎಂದು ಕಿಶೋರ್‌ ಪತ್ತಿಕೊಂಡ ಹೇಳಿದರು.‌

ADVERTISEMENT

ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಾದ ಶ್ರೀನಿವಾಸ್, ಮಹಾಂತೇಶ್ ಸಜ್ಜನ್, ಶ್ರೀನಿವಾಸ್ ಮೇಟಿ, ಜಯಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.