ADVERTISEMENT

ಕೂಡ್ಲಿಗಿ: ಮರಳು‌ ದಿನ್ನೆ ಕುಸಿದು ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 8:07 IST
Last Updated 4 ಜುಲೈ 2022, 8:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೂಡ್ಲಿಗಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಐಗಳ ಮಲ್ಲಾಪುರದಲ್ಲಿ ಸೋಮವಾರ ಮರಳು ದಿನ್ನೆ‌ ಕುಸಿದು ಮಹಾಂತೇಶ (35) ಎಂಬುವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮಹಾಂತೇಶ ತನ್ನ ಎತ್ತಿನ ಗಾಡಿಯಲ್ಲಿ ಮರಳು ತುಂಬಿಕೊಂಡು ಬರಲು ಗ್ರಾಮದ ಹೊರವಲಯದಲ್ಲಿನ ಕೆರೆ ಬಳಿ ಹೋಗಿದ್ದರು. ಮರಳು ತುಂಬುವಾಗ ಮೇಲಿಂದ‌ ಮರಳು ದಿನ್ನೆ ಮೇಲೆ ಕುಸಿದು ಬಿದ್ದಿದೆ. ಅದರಿಂದ ಹೊರಬರಲಾರದೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT