ADVERTISEMENT

20ರಂದು ವಿದ್ಯುತ್‌ ಪೂರೈಕೆ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 16:58 IST
Last Updated 18 ಜನವರಿ 2022, 16:58 IST

ಹೊಸಪೇಟೆ (ವಿಜಯನಗರ): ದುರಸ್ತಿ ಕೆಲಸ ಕೈಗೆತ್ತಿಕೊಂಡಿದ್ದರಿಂದ ಗುರುವಾರ (ಜ.20) ಬೆಳಿಗ್ಗೆ 9ರಿಂದ ಸಂಜೆ 5ರ ವರೆಗೆ ನಗರದ ಹಲವು ಬಡಾವಣೆಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸಬೇಕೆಂದು ಜೆಸ್ಕಾಂ ಪ್ರಕಟಣೆ ಕೋರಿದೆ.

ಬಸವೇಶ್ವರ ಬಡಾವಣೆ, ಕೈಗಾರಿಕೆ ಪ್ರದೇಶ, ಅಮರಾವತಿ, ಸಾಯಿರಾಮ ಬಡಾವಣೆ, ಮಲ್ಲಿನಾಥ್ ಲೇಔಟ್, ಚಿತ್ತವಾಡ್ಗಿ, ಕಲ್ಯಾಣ ನಗರ, ಪಟೇಲ್ ನಗರ, ಅನ್ನಪೂರ್ಣ ಬಡಾವಣೆ, ಕಾಲೇಜು ರಸ್ತೆ, ಇಂದಿರಾ ನಗರ, ಚಾಪಲ್‌ಗುಡ್ಡ, ಭಾರತಿ ನಗರ, ಪಟೇಲ್ ನಗರ, ರೈಲು ನಿಲ್ದಾಣ ಹಾಗೂ ರಸ್ತೆಯಿರುವ ಪ್ರದೇಶ, ಶ್ರೀರಾಮುಲು ಉದ್ಯಾನ, ಚಲುವಾದಿಕೇರಿ, ಜಬ್ಬಲ್ ಸರ್ಕಲ್ ಪ್ರದೇಶದಲ್ಲಿ ವಿದ್ಯುತ್‌ ನಿಲುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT