ADVERTISEMENT

ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಮನವಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2023, 14:52 IST
Last Updated 12 ಜುಲೈ 2023, 14:52 IST
ಯುವ ಬ್ರಿಗೇಡ್ ಸಂಚಾಲಕ ವೇಣುಗೋಪಾಲ ನಾಯಕ್ ಹಾಗೂ ಜೈನ ಮುನಿ ಹತ್ಯೆ ಖಂಡಿಸಿ ಕಾನಹೊಸಹಳ್ಳಿಯ ನಾಡ ಕಚೇರಿ ಸಿಬ್ಬಂದಿ ಅನಿತಾ ಪೂಜರ್ ಅವರಿಗೆ ವಿವಿಧ ಹಿಂದೂ ಪರ ಸಂಘಟನೆಗಳು ಮನವಿ ಸಲ್ಲಿಸಿದರು.
ಯುವ ಬ್ರಿಗೇಡ್ ಸಂಚಾಲಕ ವೇಣುಗೋಪಾಲ ನಾಯಕ್ ಹಾಗೂ ಜೈನ ಮುನಿ ಹತ್ಯೆ ಖಂಡಿಸಿ ಕಾನಹೊಸಹಳ್ಳಿಯ ನಾಡ ಕಚೇರಿ ಸಿಬ್ಬಂದಿ ಅನಿತಾ ಪೂಜರ್ ಅವರಿಗೆ ವಿವಿಧ ಹಿಂದೂ ಪರ ಸಂಘಟನೆಗಳು ಮನವಿ ಸಲ್ಲಿಸಿದರು.   

ಕಾನಹೊಸಹಳ್ಳಿ: ತಿ.ನರಸಿಪುರದ ಯುವ ಬ್ರಿಗೇಡ್ ಸಂಚಾಲಕ ವೇಣುಗೋಪಾಲ ನಾಯಕ್ ಹಾಗೂ ಜೈನ ಮುನಿ ಹತ್ಯೆ ಖಂಡಿಸಿ ಇಲ್ಲಿನ ನಾಡ ಕಚೇರಿ ಸಿಬ್ಬಂದಿ ಅನಿತಾ ಪೂಜರ್ ಅವರಿಗೆ ವಿವಿಧ ಹಿಂದೂ ಪರ ಸಂಘಟನೆಗಳು ಮನವಿ ಸಲ್ಲಿಸಿದರು.

ಹಿರೇಕುಂಬಳಗುಂಟೆಯ ನಾಗರಾಜ್ ಗೌಡ ಮಾತನಾಡಿ, ತಿ.ನರಸಿಪುರದ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ ಅವರ ಹತ್ಯೆ ಹಾಗೂ ಜೈನಮುನಿಗಳ ಹತ್ಯೆ ಸೇರಿ ಹಿಂದೂ ಕಾರ್ಯಕರ್ತರ ಹತ್ಯೆಗಳು ನಿರಂತರವಾಗಿ ನಡೆಯುತ್ತಿರುವುದು ವಿಷಾದನೀಯ ಸಂಗತಿ ಎಂದರು.

ಹಿಂದೂಗಳ ಮೇಲೆ ನಡೆಯುತ್ತಿರುವ ಹತ್ಯೆಗಳ ಕಡಿವಾಣ ಬೀಳಬೇಕಿದೆ. ತಪ್ಪಿತಸ್ತರಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ಮೃತರ ಕುಟುಂಬಗಳಿಗೂ ಹಾಗೂ ಹಿಂದೂಗಳಿಗೆ ನ್ಯಾಯ ಸಿಗಬೇಕಿದೆ ಎಂದರು.

ADVERTISEMENT

ಸುಭಾಷ್ ಚಂದ್ರ, ಕೊಲಮೆಹಟ್ಟಿ ವೆಂಕಟೇಶ್, ನಾಗೇಂದ್ರ ಸ್ಮಾಟಿ, ದಯಾನಂದ ಸಜ್ಜನ್, ವಿಶ್ವನಾಥ ಕೆ.ಎಸ್, ಹನುಮಜ್ಜರ್ ನಾಗೇಶ್, ಕೆಂಚನಲ್ಲನಹಳ್ಳಿ ಬಸವರಾಜ್, ವಿನೋದ್, ಕೆ.ಎಸ್.ಬಸವರಾಜ ವಿ, ಪೋಟೊ ನಾಗರಾಜ, ವಿರೇಶ್.ಕೆ, ಬಸವರಾಜ್, ಗುರುಮೂರ್ತಿ, ಶ್ರೀಧರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.