ಹೊಸಪೇಟೆ (ವಿಜಯನಗರ): ‘ಪತ್ರಿಕೋದ್ಯಮದಲ್ಲಿ ನಿರಂತರ ಅಧ್ಯಯನ ಅಗತ್ಯ. ಹೆಚ್ಚಿನ ಆತ್ಮಸ್ಥೈರ್ಯ, ಸೃಜನಶೀಲತೆ ಬೆಳೆಸಿಕೊಳ್ಳುವುದೂ ಮುಖ್ಯ’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಶಿವಕುಮಾರ ಕಣಸೋಗಿ ತಿಳಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಬುಧವಾರ ವಿ.ವಿ.ಯಲ್ಲಿ ಹಮ್ಮಿಕೊಂಡಿದ್ದ 'ನವಚೈತನ್ಯ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುಗದಲ್ಲಿ ಕಂಟೆಂಟ್ ರೈಟಿಂಗ್, ವರದಿಗಾರಿಕೆ, ಫೋಟೋಗ್ರಫಿಯಲ್ಲಿ ಹೇರಳ ಅವಕಾಶಗಳಿವೆ. ವಿಶೇಷವಾಗಿ ಒಟಿಟಿ ಫ್ಲಾಟ್ಫಾರಂನಲ್ಲಿ ತೊಡಗಿಸಿಕೊಂಡು ಪರಿಣತರಾದರೆ ಮಾಧ್ಯಮದಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ವಿಭಾಗದ ಮುಖ್ಯಸ್ಥ ಎಸ್.ವೈ.ಸೋಮಶೇಖರ್, ವಿಶ್ವವಿದ್ಯಾಲಯದಲ್ಲಿ ಅನಿವಾರ್ಯವಾಗಿ ಹುಟ್ಟಿಕೊಂಡ ಪತ್ರಿಕೋದ್ಯಮ ವಿಭಾಗ ಇಂದು ಬೆಳವಣಿಗೆಯತ್ತ ಹೆಜ್ಜೆ ಹಾಕುತ್ತಿರುವುದು ಖುಷಿಯ ಸಂಗತಿ ಎಂದರು. 'ವಿದ್ಯಾರಣ್ಯ ವಾರ್ತೆ' ಪ್ರಾಯೋಗಿಕ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಎಸ್.ಜಿ. ಲೋಕೇಶ್, ಕೆ, ಪದ್ಮಾವತಿ ಕೆ, ಸಂತೋಷ್ ಕುಮಾರ್ ಚಿನ್ನಣ್ಣವರ್, ದೀಪಾ ರಸ ಹೊನ್ನಪ್ಪನವರ, ಪಾಂಡುರಂಗ ಬಿ., ಸ್ಮಿತಾ ಒ.ಎಂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.