ವಿಜಯನಗರ (ಹೊಸಪೇಟೆ): ನಗರದ ಚಿತ್ತವಾಡ್ಗಿ ಹೊಸೂರು ರಸ್ತೆಯ ರಾಯ ಕಾಲುವೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ಸಮೀಪ ವಾಸಿಸುತ್ತಿದ್ದ ಯುವರಾಜ (11) ಮತ್ತು ವೇಣು (10) ಮೃತರು. ‘ಆ ಪ್ರದೇಶd ಅನೇಕ ಬಾಲಕರು ಆಗಾಗ ಕಾಲುವೆಗೆ ಈಜಾಡಲು ಹೋಗುತ್ತಾರೆ. ಬುಧವಾರ ಸಂಜೆ ಅದೇ ಬಡಾವಣೆಯ ಯುವರಾಜ, ವೇಣು ಎನ್ನುವವರು ಈಜಾಡಲು ಹೋಗಿದ್ದರು. ಆದರೆ, ತೀರ ಆಳಕ್ಕೆ ಹೋಗಿ ಸಿಲುಕಿಕೊಂಡು ಮೃತಪಟ್ಟಿದ್ದಾರೆ. ಗುರುವಾರ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದು, ಕುಟುಂಬದವರಿಗೆ ಒಪ್ಪಿಸಲಾಗಿದೆ’ ಎಂದು ಗ್ರಾಮೀಣ ಠಾಣೆ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.