ADVERTISEMENT

ಒಂದೇ ಕುಟುಂಬದ ನಾಲ್ವರಿಗೆ ಡೆಂಗೆ ಜ್ವರ

​ಪ್ರಜಾವಾಣಿ ವಾರ್ತೆ
Published 7 ಜುಲೈ 2012, 3:25 IST
Last Updated 7 ಜುಲೈ 2012, 3:25 IST

ಮುದ್ದೇಬಿಹಾಳ: ತಾಲ್ಲೂಕಿನ ಗೋನಾಳ ಎಸ್.ಎಚ್. ಗ್ರಾಮದ ತೋಳಲದಿನ್ನಿ   ಹಾಗೂ ಬಡಿಗೇರ ಕುಟುಂಬದ  ಸದಸ್ಯರು ಡೆಂಗೆ ಜ್ವರದಿಂದ ಬಳಲುತ್ತಿದ್ದು, ಸೂಕ್ತ ಸಮಯದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರಕದೇ ಬೆಳಗಾವಿಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜೀವ ಉಳಿಸಿಕೊಂಡ ಘಟನೆ ನಡೆದಿದೆ.

ಶಿವಪುತ್ರಪ್ಪ ತೋಳಲದಿನ್ನಿ, ಸಂತೋಷ ತೋಳಲದಿನ್ನಿ, ಪ್ರೇಮಾ ತೋಳಲದಿನ್ನಿ ಇವರು ಗರಸಂಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೇ ಅನಿವಾರ್ಯವಾಗಿ ಬೆಳಗಾವಿಯ ಕೆ.ಎಲ್.ಇ. ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಗುಣಮುಖರಾಗಿದ್ದಾರೆ. ಇದೇ ಗ್ರಾಮದ ಮಾನಮ್ಮ ರಾಮಚಂದ್ರ ಬಡಿಗೇರ, ದಾನೇಶ ಮಲ್ಲಣ್ಣ ಬಡಿಗೇರ (ಎಂಟು ತಿಂಗಳ ಮಗು) ಲಕ್ಷ್ಮಿಂಬಾಯಿ ಬಡಿಗೇರ ಮೊದಲಾದವರು ಇದೇ ಜ್ವರದಿಂದ ಬಳಲುತ್ತಿದ್ದಾರೆ.

ಗ್ರಾಮದಲ್ಲಿ ಇನ್ನೂ ಕೆಲವರಿಗೆ ಡೆಂಗೆ ಜ್ವರ ಬಂದಿದ್ದು ತಾಲ್ಲೂಕು ಆಡಳಿತ ಮಾತ್ರ  ಎಚ್ಚೆತ್ತುಕೊಂಡಿಲ್ಲ. ಕವಡಿಮಟ್ಟಿ  ಪಂಚಾಯಿತಿ ಹಾಗೂ  ಗರಸಂಗಿ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮದಲ್ಲಿ ಅನಾರೋಗ್ಯಕರ ವಾತಾವರಣ ಮನೆ ಮಾಡಿದೆ ಎಂದು  ಗಾ.ಪಂ. ಸದಸ್ಯ ತಿಮ್ಮಣ್ಣ ಮಾದರ ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.