ವಿಜಾಪುರ: ಜಿ.ಎಸ್. ಶಿವರುದ್ರಪ್ಪ ಒಬ್ಬ ಸಮನ್ವಯ ಭಾವಕವಿ, ಕಾಣದ್ದನ್ನು ಹುಡುಕ ಹುಕುತ್ತಲೇ ಕಾವ್ಯಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆದವರು, ರಾಷ್ಟ್ರಕವಿ ಎನಿಸಿಕೊಂಡು ಕನ್ನಡದ ರಾಷ್ಟ್ರಕವಿ ಖ್ಯಾತಿಯನ್ನು ಉಳಿಸಿ ಮುಂದುವೆರಿಸಿಕೊಂಡು ಬಂದ ಅವರ ಸೇವೆ ನಿಜವಾಗಿಯೂ ಮಾದರಿಯವಾಗಿದೆ ಎಂದು ಬಳ್ಳಾರಿ ಹಿರಿಯ ಸಾಹಿತಿ ಮಹ್ಮದ್ ಹನೀಫ್ ಸಾಹೇಬ್ ಹೇಳಿದರು.
ಅವರು ಭೃಂಗಿಮಠ ಕಾನೂನು ಹಾಗೂ ಸಾಮಾಜಿಕ ಕ್ರಿಯಾತ್ಮಕ ವೇದಿಕೆ ವಿಜಾಪುರದ ಶಿವಗಿರಿಯ ಶಿವಸಾನಿಧ್ಯದಲ್ಲಿ ಪ್ರವಾಸಿಗರಿಗಾಗಿ ಏರ್ಪಡಿಸಿದ್ದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ಪ್ರವಾಸಿಗರಿಗೆ ಜಿ.ಎಸ್.ಎಸ್. ಅಗಲಿದ ಸುದ್ದಿ ಕೇಳಿ ತುಂಬಲಾಗದ ನೋವಾಗಿದೆ.
ಪ್ರವಾಸಕ್ಕೆ ಬಂದ ಜನರಿಗೆ ಐತಿಹಾಸಿಕ ಸಾರುವ ಕಾರ್ಯಕ್ರಮಗಳನ್ನು ಸಹ ನಡೆಸುವ ಮೂಲಕ ಕಲೆ, ಸಾಹಿತ್ಯ ಉಳಿಸಿಬೆಳಸಬೇಕು ಜೊತೆಗೆ ಶಿವರುದ್ರಪ್ಪನವರ ಸಾಹಿತ್ಯ ಪ್ರತಿಯೊಬ್ಬರು ಓದಬೇಕು ಎಂದು ಹೇಳಿದರು. ಶಿಕ್ಷಕ ಚಿನ್ಮಾಡ್ಲಿ ಮಾತನಾಡಿ ಶಿವರುದ್ರಪ್ಪನವರು ಕುವೆಂಪು ಅವರ ಅನುಯಾಯಿ. ಏಕತೆ ಕಾಪಾಡಲು ಹಂಬಲಿಸಿದವರು ಎಂದರು.
ಭೃಂಗಿಮಠ ಕ್ರಿಯಾತ್ಮಕ ವೇದಿಕೆಯ ಅಧ್ಯಕ್ಷ, ವಕೀಲ ಮಲ್ಲಿಕಾರ್ಜುನ ಭೃಂಗಿಮಠ ಮಾತನಾಡಿ ಜಿ.ಎಸ್.ಎಸ್. ಅವರ ಸ್ಮಾರಕವನ್ನು ಸರ್ಕಾರ ನಿರ್ಮಾಣ ಮಾಡಬೇಕು. ಸ್ಮಾರಕ್ಕ ನಿರ್ಮಾಣಕ್ಕೆ ಸರ್ವರೂ ಸಹಕರಿಸಬೇಕಾಗಿದೆ ಎಂದು ಅವರು ಹೇಳಿದರು.
ಬಳ್ಳಾರಿಯ ಎಸ್.ಡಿ ಎಂ ಸಿ ಅಧ್ಯಕ್ಷರು ಹಿರೇಹುಡ್ಲಿಗಿ ಕನ್ನಡ ಶಾಲೆಯ ಸಿ. ಬಸವರಾಜ. ಕೆ ಆನಂದ, ಹಾಲೇಶ್, ಚಿನ್ನ ನರಸಿಂಹಪ್ಪ, ಕೇಶವರೆಡ್ಡಿ, ಧನಾಲು ಎಚ್, ಶಿವಶಂಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುಲ್ಬರ್ಗ ಜಿಲ್ಲೆಯ ಸಿದ್ದಲಿಂಗಪ್ಪ ಯರಗಲ್, ಬೀದರ ಜಿಲ್ಲೆಯ ಎಸ್.ಎಸ್.ಮಠಪತಿ, ರಾಯಚೂರಿನ ಡಾ. ರಾಜು ಕಂಬಳಿಮಠ, ಚನ್ನಪಟ್ಟಣದ ಲಕ್ಷ್ಮಿ ಈರಣ್ಣ, ಮುಂತಾದವರು ಗೌರವಾನ್ವಿತ ಅತಿಥಿ ಸ್ಥಾನಿಧ್ಯವಹಿಸಿದ್ದರು. ಕಾರ್ಯಕ್ರಮವನ್ನು ಅನೀಲ ರಾಠೋಡ್ ಸ್ವಾಗತಿಸಿ ಕೊನೆಗೆ ವಂದಿಸಿದರು, ಎರಡು ನಿಮಿಷ ಮೌನಾಚರಣೆಯ ಮೂಲಕ ಶಿವರುದ್ರಪ್ಪನವರ ಆತ್ಮಕ್ಕೆ ಶಾಂತಿ ಕೋರಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.