ವಿಜಯಪುರ: ಬೈಕಿನಲ್ಲಿ ಹೋಗುತ್ತಿದ್ದವರನ್ನು ಕಡ್ಡಗಟ್ಟಿ, ಕಣ್ಣಿಗೆ ಖಾರದ ಪುಡಿ ಎರಚಿ ಅವರ ಬಳಿ ಇದ್ದ ಹಣ, ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾಗಿದ್ದ ಆಲಮೇಲದ ಮೂವರು ದರೋಡೆಕೋರನ್ನು ಪೊಲೀಸರು ಬಂಧಿಸಿದ್ದಾರೆ.
ಆಲಮೇಲದ ರಫೀಕ್ ಮನಗೂಳಿ(20), ರಾಜಾ ಸೌದಾಗರ(19), ಮಹಿಬೂಬ ಸೌದಾಗರ(20) ಅವರನ್ನು ಪೊಲೀಸರುವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ ₹ 25 ಸಾವಿರ ನಗದು ಮತ್ತು ಎರಡು ಮೊಬೈಲ್ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಎರಡು ಬೈಕ್, ಒಂದು ಖಾರದಪುಡಿ ಚೀಲವನ್ನು ವಶಪಡಿಸಿಕೊಂಡಿದ್ದಾರೆ.
ಕಕ್ಕಳಮೇಲಿ ನಿವಾಸಿ ಸಿದ್ಧಪ್ಪ ಬಳಬಟ್ಟಿ ಆಗಸ್ಟ್ 7ರಂದು ರಾತ್ರಿ 10.45ಕ್ಕೆ ವಿಭೂತಿಹಳ್ಳಿ ಕಡೆಯಿಂದ ತೋಂಟಾಪುರಕ್ಕೆ ಬೈಕ್ನಲ್ಲಿ ಹೊರಟಿದ್ದಾಗ, ಮೂರು ಬೈಕುಗಳಲ್ಲಿ ಹಿಂಬಾಲಿಸಿದ ದರೋಡೆಕೋರರು, ಬೈಕ್ ಅಡ್ಡಗಟ್ಟಿ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಬಳಿಕ ಅವರ ಬಳಿ ಇದ್ದ ₹ 25 ಸಾವಿರ ನಗದು, ಮೊಬೈಲ್ ಫೋನ್ ಕಸಿದಿಕೊಂಡು ಪರಾರಿಯಾಗಿದ್ದರು.
ಅದೇ ರೀತಿ ರಾಮನಹಳ್ಳಿಯ ರಮೇಶ ಹಳೆಮನಿ ಅವರು ಬೈಕ್ನಲ್ಲಿ ತಮ್ಮೂರಿಗೆ ಹೋಗುವಾಗ ಅಡ್ಡಗಟ್ಟಿದ ದರೋಡೆಕೋರರು, ಅವರ ಕಣ್ಣಿಗೂ ಖಾರದ ಪುಡಿ ಎರಚಿ ಅವರ ಬಳಿ ಇದ್ದ ₹7 ಸಾವಿರ ನಗದು ಮತ್ತು ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾಗಿದ್ದರು.
ಇಂಡಿ ಉಪವಿಭಾಗದ ಡಿಎಸ್ಪಿ ಟಿ.ಎಸ್.ಸುಲ್ಪಿ ನೇತೃತ್ವದಲ್ಲಿ ದರೋಡೆಕೋರರ ಪತ್ತೆಗೆರಚನೆ ಮಾಡಲಾಗಿದ್ದ ತನಿಖಾ ತಂಡವು ಗುರುವಾರ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಂದಗಿ ಸಿಪಿಐ ಸತೀಶಕುಮಾರ ಎಸ್.ಕಾಂಬಳೆ,ಆಲಮೇಲಪಿಎಸ್ಐ ನಿಂಗಪ್ಪ ಎಚ್.ಪೂಜೇರಿ, ಸಿಬ್ಬಂದಿಗಳಾದ ಎಲ್.ಯು.ನಧಾಪ, ಎಂ.ಜಿ.ಪಾಟೀಲ, ಎನ್.ಆರ್.ಚೌಧರಿ, ಎಸ್.ಎಲ್.ತೆನ್ನಿಹಳ್ಳಿ, ರಾಜು ರಾಠೋಡ, ಎಸ್.ಕೆ.ಕಲ್ಲೂರ, ಎಂ.ಎಸ್.ಗೊರನಾಳ, ಎಸ್.ಎಚ್.ಇಂಡಿ, ಎಸ್.ಬಿ.ದಿಂಡವಾರ, ಪ್ರಕಾಶ ಮೈದರಗಿ, ಎಸ್.ಎಸ್.ಬಾಪಗೊಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.