ವಿಜಯಪುರ: ನವ ವಿವಾಹಿತೆಗೆ ಆಕೆಯ ಪತಿ ಹಾಗೂ ಪತಿಯ ಮನೆಯವರು ಸೇರಿಕೊಂಡು ದೈಹಿಕ ಹಲ್ಲೆ, ಮಾನಸಿಕ ಕಿರುಕುಳ ನೀಡಿದ ಪರಿಣಾಮ ಸಾವನಪ್ಪಿರುವ ಘಟನೆಕೂಡಗಿ ಪೊಲೀಸ್ ಠಾಣೆ ವ್ಯಾಪ್ತಿಯ ಮಧಬಾವಿ ತಾಂಡಾದಲ್ಲಿ ನಡೆದಿದೆ.
ಮಧಭಾವಿ ತಾಂಡಾದ ಸಂಗೀತ(24) ಅವರ ವಿವಾಹ ಅದೇ ತಾಂಡಾದ ಹಬ್ಬು ಪುನ್ನು ರಾಠೋಡ ಜೊತೆಯಾಗಿತ್ತು. ಒಂದೆರಡು ತಿಂಗಳು ಸರಿಯಾಗಿ ನೋಡಿಕೊಂಡಿದ್ದ ಪತಿಯ ಮನೆಯವರು ಬಳಿಕ ‘ನೀನು ಸರಿ ಇಲ್ಲ. ನಿನಗೆ ಅಡುಗೆ ಮಾಡಲು ಬರುವುದಿಲ್ಲ ಎಂದು ನಿಂದಿಸಿದ್ದಾರೆ. ಅಲ್ಲದೇ, ಸಂಬಂಧಿಕರು ಫೋನ್ ಮಾಡಿದ್ದಾಗ ಅವರ ಮೇಲೆ ಸಂಶಯ ಪಟ್ಟು, ಅವಳೊಂದಿಗೆ ಕಿರಿಕಿರಿ ಮಾಡಿದ್ದಾರೆ’ ಎಂದು ಸಾವಿಗೀಡಾಗಿರುವ ಸಂಗೀತಳ ಸಂಬಂಧಿರಮೇಶ ಪವಾರ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಪತಿ ಮತ್ತು ಅತ್ತೆ, ಮಾವು ಸೇರಿಕೊಂಡು ಬೆಲ್ಟ್, ಕೈಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಗೆ ವಿಜಯಪುರ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಸ್ಪಂದಿಸದೆ ಮಂಗಳವಾರ ಸಾವನಪ್ಪಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.