ADVERTISEMENT

ಕುತೂಹಲ ಮೂಡಿಸಿದ ಬಸನಗೌಡ ಪಾಟೀಲ ಯತ್ನಾಳ–ರಮೇಶ ಜಾರಕಿಹೊಳಿ ಗೌಪ್ಯ ಚರ್ಚೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2021, 13:22 IST
Last Updated 14 ನವೆಂಬರ್ 2021, 13:22 IST
ವಿಜಯಪುರ ನಗರದ ಹೊರವಲಯದಲ್ಲಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ತೋಟದ ಮನೆಗೆ ಭಾನುವಾರ ಭೇಟಿ ನೀಡಿದ ಮಾಜಿ ಸಚಿವ ರಮೇಶ ಜಾರಕಿಹೊಳಿ  ಚರ್ಚೆ ನಡೆಸಿದರು
ವಿಜಯಪುರ ನಗರದ ಹೊರವಲಯದಲ್ಲಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ತೋಟದ ಮನೆಗೆ ಭಾನುವಾರ ಭೇಟಿ ನೀಡಿದ ಮಾಜಿ ಸಚಿವ ರಮೇಶ ಜಾರಕಿಹೊಳಿ  ಚರ್ಚೆ ನಡೆಸಿದರು   

ವಿಜಯಪುರ: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರುಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಭಾನುವಾರ ನಗರದಲ್ಲಿ ಗೌಪ್ಯವಾಗಿ ಭೇಟಿ ಮಾಡಿ, ಸುಮಾರು ಒಂದು ತಾಸು ಚರ್ಚೆ ನಡೆಸಿರುವುದು ರಾಜಕೀಯ ಕುತೂಹಲ ಕೆರಳಿಸಿದೆ.

ನಗರದ ಹೊರ ಭಾಗದಲ್ಲಿರುವ ಯತ್ನಾಳ ಅವರ ತೋಟದ ಮನೆಯಲ್ಲಿ ಇಬ್ಬರು ನಾಯಕರು,ಪ್ರಸಕ್ತ ರಾಜಕೀಯ ಬೆಳವಣಿಗೆ, ವಿಧಾನ ಪರಿಷತ್‌ ಚುನಾವಣೆ, ಸಚಿವ ಸ್ಥಾನ ಬೇಡಿಕೆ, ಬಿಟ್ ಕಾಯಿನ್ ಪ್ರಕರಣ, ಪಕ್ಷ ಸಂಘಟನೆ ಕುರಿತು ಸುದೀರ್ಘ ಚರ್ಚೆ ನಡೆಸಿದರು.

ನೆರೆಯ ಮಹಾರಾಷ್ಟ್ರದಸಾಂಗ್ಲಿಯಿಂದ ನೇರವಾಗಿ ಯತ್ನಾಳ ಅವರ ತೋಟದ ಮನೆಗೆ ಆಗಮಿಸಿದ ರಮೇಶ ಜಾರಕಿಹೊಳಿ, ಮಾತುಕತೆ ಬಳಿಕ ಬೆಳಗಾವಿಗೆ ತೆರಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.