ADVERTISEMENT

ಬಸವೇಶ್ವರ ಬೆಳ್ಳಿ ಮೂರ್ತಿ ತಯಾರಿಕೆಗೆ ಅರ್ಧ ಕೆ.ಜಿ ಬೆಳ್ಳಿ ದೇಣಿಗೆ ನೀಡಿದ ಭಕ್ತ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 14:34 IST
Last Updated 7 ಜೂನ್ 2025, 14:34 IST
ಮುದ್ದೇಬಿಹಾಳ ತಾಲ್ಲೂಕು ಕುಂಟೋಜಿ ಬಸವಣ್ಣನ ಬೆಳ್ಳಿ ಮೂರ್ತಿ ತಯಾರಿಕೆಗೆ ಅರ್ಧ ಕೆ.ಜಿ ಬೆಳ್ಳಿ ದೇಣಿಗೆ ನೀಡಿದ ಬೀಳಗಿಯ ಭೀಮಪ್ಪ ಕುಂಬಾರ ಅವರನ್ನು ದೇವಸ್ಥಾನ ಕಮಿಟಿಯಿಂದ ಸನ್ಮಾನಿಸಲಾಯಿತು
ಮುದ್ದೇಬಿಹಾಳ ತಾಲ್ಲೂಕು ಕುಂಟೋಜಿ ಬಸವಣ್ಣನ ಬೆಳ್ಳಿ ಮೂರ್ತಿ ತಯಾರಿಕೆಗೆ ಅರ್ಧ ಕೆ.ಜಿ ಬೆಳ್ಳಿ ದೇಣಿಗೆ ನೀಡಿದ ಬೀಳಗಿಯ ಭೀಮಪ್ಪ ಕುಂಬಾರ ಅವರನ್ನು ದೇವಸ್ಥಾನ ಕಮಿಟಿಯಿಂದ ಸನ್ಮಾನಿಸಲಾಯಿತು   

ಮುದ್ದೇಬಿಹಾಳ: ತಾಲ್ಲೂಕಿನ ಕುಂಟೋಜಿ ಗ್ರಾಮದ ಐತಿಹಾಸಿಕ ಬಸವೇಶ್ವರರ ದೇವಸ್ಥಾನಕ್ಕೆ ಭಕ್ತರೊಬ್ಬರು ಅರ್ಧ ಕೆ.ಜಿ ಬೆಳ್ಳಿ ನೀಡಿದ್ದಾರೆ.

ಬೀಳಗಿಯ ಭೀಮಪ್ಪ ಕುಂಬಾರ ಎಂಬುವವರು ಬಸವಣ್ಣನ ಮೂರ್ತಿ ಮಾಡಿಸಲು 500 ಗ್ರಾಂ ಬೆಳ್ಳಿ ನೀಡಿದ್ದಾರೆ. ಗದಗ ಜಿಲ್ಲೆ ಯಲ್ಲಪ್ಪ ಕುಂಬಾರ ಅವರು 210 ಗ್ರಾಂ ತೂಕದ 113 ಬೆಳ್ಳಿ ನಾಣ್ಯಗಳನ್ನು, ಮುದ್ನೂರು ಗ್ರಾಮದ ನಿವೃತ್ತ ಶಿಕ್ಷಕ ಸಿದ್ಧಯ್ಯ ಮಠ ಮತ್ತು ಕುಟುಂಬದವರು 250 ಗ್ರಾಂ ಬೆಳ್ಳಿಯನ್ನು ದೇಣಿಗೆ ನೀಡಿದ್ದಾರೆ.

ಕುಂಟೋಜಿ ಬಸವೇಶ್ವರ ದೇವಸ್ಥಾನ ಕಮಿಟಿಯ ಅಧ್ಯಕ್ಷರಾದ ಗುರುಲಿಂಗಪ್ಪ ಸುಲ್ಲಳ್ಳಿ, ಉಪಾಧ್ಯಕ್ಷ ಆನಂದ ಗಸ್ತಿಗಾರ, ಕಾರ್ಯದರ್ಶಿ ಮಲ್ಲಿಕಾರ್ಜುನ ನಾಟೀಕಾರ, ರಾಮಣ್ಣ ಹುಲಗಣ್ಣಿ, ಖಜಾಂಚಿ ಬಸಲಿಂಗಪ್ಪಗೌಡ ಬಿರಾದಾರ, ನಾಗಲಿಂಗಯ್ಯ ಮಠ, ಗುರುಪಾದಪ್ಪ ಹೆಬ್ಬಾಳ, ಸಿದ್ದು ಕೋಲಕಾರ, ಸಂಗಣ್ಣ ಕುಂಬಾರ, ಗುರು ಮಡಿವಾಳರ, ಸಂಗಯ್ಯ ಮಠ, ವೀರಭದ್ರ ಪತ್ತಾರ, ನಾಗಪ್ಪ ಸಜ್ಜನ, ಪ್ರಕಾಶ ಹೂಗಾರ, ಈರಬಸ್ಸು ಊರಾನ, ಹುಚ್ಚೇಸಾ ನಾಲತವಾಡ, ಹಣಮಂತ ಭಜಂತ್ರಿ, ರುದ್ರಯ್ಯ ಮಠ, ಈರಣ್ಣ ಹೂಗಾರ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.