ADVERTISEMENT

ವಿಜಯಪುರ: ಗುಮ್ಮಟನಗರಿಯಲ್ಲಿ ಈದ್ ಮಿಲಾದ್ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 6:17 IST
Last Updated 5 ಸೆಪ್ಟೆಂಬರ್ 2025, 6:17 IST
<div class="paragraphs"><p>ವಿಜಯಪುರ&nbsp;ನಗರದಲ್ಲಿ ಗುರುವಾರ&nbsp;ಈದ್ ಮಿಲಾದ್ ಅಂಗವಾಗಿ ಬೃಹತ್‌ ರ‍್ಯಾಲಿ ನಡೆಯಿತು </p></div>

ವಿಜಯಪುರ ನಗರದಲ್ಲಿ ಗುರುವಾರ ಈದ್ ಮಿಲಾದ್ ಅಂಗವಾಗಿ ಬೃಹತ್‌ ರ‍್ಯಾಲಿ ನಡೆಯಿತು

   

-ಪ್ರಜಾವಾಣಿ ಚಿತ್ರ

ವಿಜಯಪುರ: ಈದ್ ಮಿಲಾದ್ ಹಬ್ಬದ ಮುನ್ನಾ ದಿನವಾದ ಗುರುವಾರ ಅಂಜುಮನ್‌ ಇಸ್ಲಾಂ ಬಿಜಾಪುರ ಮತ್ತು ಮೈನಾರಿಟಿ ಮುಸ್ಲಿಂ ಡೆವಲಪ್‌ಮೆಂಟ್‌ ಕಮಿಟಿ ಸಹಯೋಗದಲ್ಲಿ ಬೃಹತ್‌ ರ‍್ಯಾಲಿ ನಡೆಯಿತು.

ADVERTISEMENT

ಮಹಮ್ಮದ್ ಪೈಗಂಬರ್ ಜನ್ಮ ದಿನ ಪ್ರಯುಕ್ತ ಆಯೋಜಿಸಲಾಗಿದ್ದ ಮೆರವಣಿಗೆಯು ನಗರದ ಹಕೀಂ ಚೌಕದಿಂದ ಆರಂಭಗೊಂಡು ಜುಮ್ಮಾ ಮಸೀದಿ, ಬಡಿಕಮಾನ್, ಅತಾವುಲ್ಲಾ ಸರ್ಕಲ್, ಬಾಗಲಕೋಟೆ ಸರ್ಕಲ್, ಬಸವೇಶ್ವರ ಸರ್ಕಲ್, ಅಂಬೇಡ್ಕರ್ ಸರ್ಕಲ್, ಕನಕದಾಸ ಸರ್ಕಲ್ ಮೂಲಕ ಸಾಗಿ ಆಸರ್ ಮಹಲ್‌ಗೆ ತೆರಳಿತು.

ನಾಥ್ ಹಾಗೂ ದರೂದ್ ಪಠಣದೊಂದಿಗೆ ಮೆರವಣಿಗೆ ನಡೆಯಿತು. ಶ್ವೇತ ವಸ್ತ್ರಧಾರಿಗಳಾದ ಯುವ ಜನರು ಧರ್ಮದ ಧ್ವಜಗಳನ್ನು ಹಿಡಿದು ಮಹಮ್ಮದ್‌ ಪೈಗಂಬರ್‌ ಪರ ಘೋಷಣೆಗಳನ್ನು ಹಾಕುತ್ತಾ ಸಾಗಿದರು. ಮೆರವಣಿಗೆ ಬಳಿಕ ಆಸರ್‌ ಮಹಲ್‌ನಲ್ಲಿ ಇರುವ ಪೈಗಂಬರ್‌ ಅವರ ಕೇಶ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. 

ಹಾಸಿಂಪೀರಾ ದರ್ಗಾದ ಸಜ್ಜಾದೆ ಮುರ್ಸಿದ್‌ ಪೀರಾ, ಅರ್ಕಾಟ್‌ ದರ್ಗಾದ ಸಜ್ಜಾದೆ ತಖೀಪೀರಾ, ಬುರ್ಖಾಪೋಷ್‌ ದರ್ಗಾದ ಸಯ್ಯದ್‌ ಸಾಹೇಬ್‌, ಮನಗೂಳಿ ಇನಾಂದಾರ್‌ ಸಾಹೇಬ್‌, ಮುಖಂಡರಾದ ಎಲ್.ಎಲ್. ಉಸ್ತಾದ್, ಬಿ.ಎಚ್. ಮಹಾಬರಿ, ಹಮೀದ್‌ ಮುಶ್ರೀಫ್‌, ಅಬ್ದುಲ್‌ ರಜಾಕ್‌ ಹೊರ್ತಿ, ಜಮೀರ್ ಅಹಮ್ಮದ್ ಬಾಂಗಿ, ಇರ್ಫಾನ್‌ ಶೇಖ್‌, ಜಮೀರ್ ಅಹಮ್ಮದ್ ಭಕ್ಷಿ, ರಫೀಕ್ ಅಹಮ್ಮದ್ ಸೌದಾಗರ, ಅಲ್ತಾಪ್ ಖಾದ್ರಿ, ಮಹಮ್ಮದ್‌ ರಫೀಕ್‌ ಕಾಣೆ, ಜಮೀರ್‌ ಅಹಮದ್‌ ಬಾಂಗಿ, ಅಪ್ರೋಜ್‌ ವಾಟಿ, ಅಲ್ತಾಫ್‌ ಇಟಗಿ, ಬಂದೇನವಾಜ್‌ ಇಟಗಿ, ಸದ್ದಾಂ ನಾಡೇವಾಲೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.